* ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಗುರುತಿಸುವ 70ನೇ ಅತಿ ವಿಶಿಷ್ಟ ರೈಲ್ ಸೇವಾ ಪುರಸ್ಕಾರ (Ati Vishisht Rail Seva Puraskar) ಪ್ರದಾನ ಸಮಾರಂಭವು ಜನವರಿ 9, 2026 ರಂದು ನವದೆಹಲಿಯ ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಪ್ರಶಸ್ತಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ, ರವನೀತ್ ಸಿಂಗ್ ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್ ಉಪಸ್ಥಿತರಿದ್ದರು.*  ಪುರಸ್ಕಾರದ ಹಂಚಿಕೆ ಮತ್ತು ವಿಭಾಗಗಳು: ಒಟ್ಟು 100 ಸಾಧಕರಿಗೆ ರೈಲ್ವೆಯ ಕಾರ್ಯಕ್ಷಮತೆಯನ್ನು ಉತ್ತೇಜಿಸಿದಕ್ಕಾಗಿ ಏಳು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. ಇದರಲ್ಲಿ ನವೀನತೆ (17) ವಿಭಾಗದಲ್ಲಿ ಪ್ರಕ್ರಿಯೆ ಸುಧಾರಣೆ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ ಗೌರವ ದೊರೆತಿದ್ದು, ಸಾಹಸ ಮತ್ತು ಸೇವೆ (22) ವಿಭಾಗವು ಪ್ರಯಾಣಿಕರ ಜೀವ ಮತ್ತು ರೈಲ್ವೆ ಆಸ್ತಿ ರಕ್ಷಣೆಗೆ ಸಲ್ಲಿಸಿದ ಅಪೂರ್ವ ಧೈರ್ಯವನ್ನು ಗುರುತಿಸಿದೆ. ಆದಾಯ ಮತ್ತು ಜಾಗೃತಿ (14) ವಿಭಾಗದಲ್ಲಿ ಟಿಕೆಟ್ ರಹಿತ ಪ್ರಯಾಣ ತಡೆದು ಆದಾಯ ವೃದ್ಧಿಗೆ ಕೊಡುಗೆ ನೀಡಿದವರನ್ನು ಪ್ರಶಂಸಿಸಲಾಗಿದೆ. ಕಾರ್ಯಾಚರಣೆ ಮತ್ತು ಸುರಕ್ಷತೆ (19) ವಿಭಾಗವು ಸುರಕ್ಷಿತ ರೈಲು ಸಂಚಾರ ಹಾಗೂ ಮೂಲಸೌಕರ್ಯ ನಿರ್ವಹಣೆಯಲ್ಲಿನ ಶ್ರೇಷ್ಠತೆಯನ್ನು ಹೈಲೈಟ್ ಮಾಡುತ್ತದೆ. ಯೋಜನೆಗಳ ಪೂರ್ಣಗೊಳಿಕೆ (16) ವಿಭಾಗದಲ್ಲಿ ನಿಗದಿತ ಅವಧಿಗಿಂತ ಮುಂಚಿತವಾಗಿ ಯೋಜನೆಗಳನ್ನು ಮುಕ್ತಾಯಗೊಳಿಸಿದ ಸಾಧನೆಯನ್ನು ಗೌರವಿಸಲಾಗಿದೆ. ಜೊತೆಗೆ ಕ್ರೀಡಾ ಸಾಧನೆ (2) ವಿಭಾಗದಲ್ಲಿ ರಾಷ್ಟ್ರೀಯ–ಅಂತರಾಷ್ಟ್ರೀಯ ಮಟ್ಟದ ಗೌರವ ಪಡೆದ ರೈಲ್ವೆ ಕ್ರೀಡಾಪಟುಗಳು ಹಾಗೂ ಇತರ ಸೇವೆಗಳು (10) ವಿಭಾಗದಲ್ಲಿ ವಿವಿಧ ಕಾರ್ಯಾಚರಣೆಗಳಲ್ಲಿ ತೋರಿದ ವಿಶೇಷ ದಕ್ಷತೆ ಪ್ರಶಸ್ತಿಗೆ ಪಾತ್ರವಾಗಿದೆ.* ಈ ಬಾರಿಯ ಪ್ರಶಸ್ತಿ ಪ್ರದಾನದಲ್ಲಿ ಕೆಲವು ವಿಶೇಷ ಸಾಧನೆಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ:- ಮಹಾಕುಂಭ ಮೇಳ 2025: ಕುಂಭಮೇಳದ ಸಮಯದಲ್ಲಿ ಕೋಟ್ಯಂತರ ಪ್ರಯಾಣಿಕರ ಸುರಕ್ಷಿತ ಸಂಚಾರ ನಿರ್ವಹಣೆ ಮಾಡಿದ ತಂಡಕ್ಕೆ ವಿಶೇಷ ಗೌರವ ನೀಡಲಾಗಿದೆ.- ಆಪರೇಷನ್ ಸಿಂದೂರ್: ಗಡಿ ಭದ್ರತೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ರೈಲ್ವೆ ನೀಡಿದ ಅಸಾಧಾರಣ ಸೇವೆಯನ್ನು ಪುರಸ್ಕರಿಸಲಾಗಿದೆ.- ತಾಂತ್ರಿಕ ಕ್ರಾಂತಿ: ರೈಲ್ವೆ ಹಳಿಗಳ ಸುರಕ್ಷತೆಗಾಗಿ 'ಬ್ಯಾಲೆಸ್ಟ್ ಕ್ಲೀನಿಂಗ್ ಮೆಷಿನ್' ಅಳವಡಿಕೆಯಲ್ಲಿ ಶ್ರಮಿಸಿದ ತಾಂತ್ರಿಕ ಸಿಬ್ಬಂದಿಗೆ ಮನ್ನಣೆ ಸಿಕ್ಕಿದೆ.- ಸಾಂಸ್ಥಿಕ ಶ್ರೇಷ್ಠತೆ: ವೈಯಕ್ತಿಕ ಪ್ರಶಸ್ತಿಗಳ ಜೊತೆಗೆ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರೈಲ್ವೆ ವಲಯಗಳಿಗೆ (Zones) 26 ಶೀಲ್ಡ್‌ಗಳನ್ನು ನೀಡಿ ಗೌರವಿಸಲಾಯಿತು.