Loading..!

ಉತ್ತರಕರ್ನಾಟಕದ ಈ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:2 ಅಕ್ಟೋಬರ್ 2020
not found
ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಬರುವ ಅನುದಾನಿತ ಪದವಿ ಮಹಾವಿದ್ಯಾಲಯಗಳಲ್ಲಿ ಖಾಲಿಯಿರುವ ಬ್ಯಾಕ್ ಲಾಗ್ ಬೋಧಕ ಹುದ್ದೆಯನ್ನು ತುಂಬಿಕೊಳ್ಳಲು ಮಾನ್ಯ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ,ಬೆಂಗಳೂರು ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ಕಲಬುರಗಿ ಇವರು ಅನುಮತಿ ನಿಡಿರುವ ಪ್ರಯುಕ್ತ ಅರ್ಹ ಅಭ್ಯರ್ಥಿಗಳಿಂದ ದೈಹಿಕ ಶಿಕ್ಷಣ ನಿರ್ದೇಶಕರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ ಹಾಗೂ ಸಂಬಂಧಪಟ್ಟ ಅವಶ್ಯಕ ದಾಖಲೆಗಳನ್ನು ಜೆರಾಕ್ಸ್ ಪ್ರತಿಯೊಂದಿಗೆ ಲಗತ್ತಿಸಿ ಮಾನ್ಯ ಅಧ್ಯಕ್ಷರು, ಶಾಂತಿವರ್ಧಕ ಶಿಕ್ಷಣ ಸಂಸ್ಥೆ, ಬಾಲ್ಕಿ ಇವರ ಹೆಸರಿನಲ್ಲಿ ರೂ - 500/- ಡಿ.ಡಿ.ಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಮಾನ್ಯ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ ಕಲಬುರಗಿ ಇವರಿಗೆ ಸಲ್ಲಿಸಬೇಕು.
Application Start Date:  1 ಅಕ್ಟೋಬರ್ 2020
Application End Date:  20 ಅಕ್ಟೋಬರ್ 2020
Qualification: - ಎಮ್.ಪಿ.ಎಡ್  ಪರೀಕ್ಷೆಯಲ್ಲಿ ಕನಿಷ್ಠ 50 % ಅಂಕಗಳನ್ನು ಹೊಂದಿರಬೇಕು. ಮತ್ತು ಎನ್.ಇ.ಟಿ / ಎಸ್.ಎಲ್.ಇ.ಟಿ ಅಥವಾ ಪಿ.ಹೆಚ್.ಡಿ ಪದವಿಯನ್ನು ಹೊಂದಿರಬೇಕು.  
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download Press Notification

Comments