➤ ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಜಪಥ (ಕರ್ತವ್ಯ ಪಥ) ಸಜ್ಜಾಗುತ್ತಿದೆ. ಈ ಬಾರಿಯ ಪಥಸಂಚಲನದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು 'ವಂದೇ ಮಾತರಂ' ಎಂಬ ಶಕ್ತಿಯುತ ಧೈಯವಾಕ್ಯದೊಂದಿಗೆ ಅತ್ಯಾಧುನಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದೆ. ದೇಶದ ನಾರೀಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಈ ಸ್ತಬ್ಧಚಿತ್ರವು ಅನಾವರಣಗೊಳಿಸಲಿದೆ.ಈ ಬಾರಿಯ ಪರೇಡ್‌ನಲ್ಲಿ ಎರಡು ಪ್ರಮುಖ ಪರಿಕಲ್ಪನೆಗಳಡಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುವುದು:1. 'ಸ್ವತಂತ್ರತಾ ಕಾ ಮಂತ್ರ - ವಂದೇ ಮಾತರಂ' (ಸ್ವಾತಂತ್ರ್ಯದ ಮಂತ್ರ - ವಂದೇ ಮಾತರಂ)2. 'ಸಮೃದ್ಧಿ ಕಾ ಮಂತ್ರ - ಆತ್ಮನಿರ್ಭರ ಭಾರತ' (ಸಮೃದ್ಧಿಯ ಮಂತ್ರ - ಸ್ವಾವಲಂಬಿ ಭಾರತ)➤ 2026ರ ಗಣರಾಜ್ಯೋತ್ಸವಕ್ಕೆ ಇಬ್ಬರು ಅಂತರಾಷ್ಟ್ರೀಯ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ:1. ಅಂಟೋನಿಯೊ ಕೋಸ್ಟಾ: ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷರು.2. ಉರ್ಸುಲಾ ವಾನ್ ಡೆರ್ ಲೇಯನ್: ಯುರೋಪಿಯನ್ ಕಮಿಷನ್‌ನ ಅಧ್ಯಕ್ಷರು.➤ ವಂದೇ ಮಾತರಂ ಸ್ತಬ್ಧಚಿತ್ರದ ವಿಶೇಷತೆಗಳು: ಸಂಸ್ಕೃತಿ ಸಚಿವಾಲಯವು ಪ್ರದರ್ಶಿಸಲಿರುವ ಈ ಸ್ತಬ್ಧಚಿತ್ರದ ಪ್ರಮುಖ ಅಂಶಗಳು ಹೀಗಿವೆ: - 1875ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಈ ಹಾಡು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿತ್ತು. - ಸ್ತಬ್ಧಚಿತ್ರದಲ್ಲಿ ವಂದೇ ಮಾತರಂ ಹಾಡಿನ ಮೂಲ ಕೈಬರಹದ ಪ್ರತಿಯನ್ನು ಪ್ರದರ್ಶಿಸಲಾಗುತ್ತದೆ.- 1923ರಲ್ಲಿ ಕಲಾವಿದ ತೇಜೇಂದ್ರ ಕುಮಾರ್ ಮಿತ್ರ ಅವರು ಈ ಹಾಡಿನ ಸಾಲುಗಳನ್ನು ಆಧರಿಸಿ ಬಿಡಿಸಿದ ಚಿತ್ರಗಳನ್ನು ಕರ್ತವ್ಯ ಪಥದ ಉದ್ದಕ್ಕೂ ಪ್ರದರ್ಶಿಸಲಾಗುತ್ತದೆ.- ಇಂದಿನ ಪೀಳಿಗೆಯನ್ನು ಪ್ರತಿನಿಧಿಸುವ 'ಜೆನ್-ಜಿ' (Gen-Z) ಯುವಕರು ಈ ಹಾಡನ್ನು ಹಾಡಲಿದ್ದಾರೆ. ಇದರ ಜವಾಬ್ದಾರಿಯನ್ನು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ (IGNCA) ವಹಿಸಿಕೊಂಡಿದೆ.➤ ಚಿತ್ರರಂಗದ ಮೊದಲ ಪ್ರವೇಶ : ಖ್ಯಾತ ಚಲನಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನೆಮಾ ರಂಗದ ಸಾಧನೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಿದ್ದಾರೆ.➤ ಮಿಲಿಟರಿ ಶಕ್ತಿ ಮತ್ತು ವೈಮಾನಿಕ ಪ್ರದರ್ಶನ:-1. ಯುದ್ಧೋಪಕರಣಗಳು: ಟಿ-90 ಟ್ಯಾಂಕ್‌ಗಳು, ಅರ್ಜುನ್ ಎಂ.ಬಿ.ಟಿ, ಬ್ರಹ್ಮೋಸ್ ಕ್ಷಿಪಣಿ, ಆಕಾಶ್ ಕ್ಷಿಪಣಿ ವ್ಯವಸ್ಥೆ ಮತ್ತು ಡ್ರೋನ್‌ಗಳ ಪ್ರದರ್ಶನ ಇರಲಿದೆ.2. ಫ್ಲೈಪಾಸ್ಟ್: ರಫೇಲ್, ಸುಖೋಯ್-30, ಅಪಾಚೆ ಮತ್ತು ಎಲ್.ಸಿ.ಎಚ್ (LCH) ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಸಾಹಸ ಪ್ರದರ್ಶಿಸಲಿವೆ.➤ ವಿಶೇಷ ಆಹ್ವಾನಿತರು: ಈ ಬಾರಿ ಸುಮಾರು 10,000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ:- ವಿಶ್ವ ಅಥ್ಲೆಟಿಕ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತರು.- ನೈಸರ್ಗಿಕ ಕೃಷಿ ಮಾಡುವ ರೈತರು.- ISRO ದ ಗಗನಯಾನ ಮತ್ತು ಚಂದ್ರಯಾನ ಯೋಜನೆಯ ವಿಜ್ಞಾನಿಗಳು.- PM SMILE ಯೋಜನೆಯಡಿ ಪುನರ್ವಸತಿ ಪಡೆದ ಮಂಗಳಮುಖಿಯರು ಮತ್ತು ಭಿಕ್ಷುಕರು.➤ ವಂದೇ ಮಾತರಂ ಹಾಡನ್ನು ಮೊದಲ ಬಾರಿಗೆ 1896ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ಹಾಡಿದ್ದರುದೈನಂದಿನ ಕರಂಟ್ ಅಫೇರ್ಸ್ ಕ್ವಿಜ್‌ಗಾಗಿ ಈ ಲಿಂಕ್ ಬಳಸಿ