* ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ (SDG) ಆಧಾರದ ಮೇಲೆ ನೀತಿ ಆಯೋಗ ಪ್ರಕಟಿಸಿರುವ 2023–24ನೇ ಆರ್ಥಿಕ ವರ್ಷದ 'ಸುಸ್ಥಿರ ಅಭಿವೃದ್ಧಿ ಗುರಿ ಭಾರತದ ಸೂಚ್ಯಂಕ'ದಲ್ಲಿ  ಉತ್ತರಾಖಂಡ ಮತ್ತು ಕೇರಳ ಅತ್ಯುತ್ತಮ ಸಾಧಕ ರಾಜ್ಯಗಳೆಂಬ ಶ್ರೇಯಕ್ಕೆ ಭಾಜನವಾಗಿದ್ದು, ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿವೆ. * ಈ ಸೂಚ್ಯಂಕದಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದುಕೊಂಡಿದೆ. ಬಿಹಾರ್, ಜಾರ್ಖಂಡ್ ಮತ್ತು ನಾಗಾಲ್ಯಾಂಡ್ ಕೊನೆಯ ಸ್ಥಾನದಲ್ಲಿವೆ.   * ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಬೆಳವಣಿಗೆಗೆ ಈ ವರದಿ ಕನ್ನಡಿ ಹಿಡಿದಿದೆ.* ಎಸ್‌ಡಿಜಿ ಪ್ರಮುಖ ಗುರಿ : ಬಡತನ ನಿರ್ಮೂಲನೆ, ಹಸಿವು ನಿವಾರಣೆ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ದ ನೀರು ಮತ್ತು ನೈರ್ಮಲ್ಯ, ಕೈಗೆಟಕುವ ನವೀಕರಿಸಬಹುದಾದ ಇಂಧನ, ಅರ್ಹ ಕೆಲಸ ಮತ್ತು ಆರ್ಥಿಕತೆ ಬೆಳವಣಿಗೆ, ಕೈಗಾರಿಕೆ -ಅನ್ವೇಷಣೆ-ಮೂಲ ಸೌಕರ್ಯ, ಅಸಮಾನತೆ ನಿರ್ಮೂಲನೆ, ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಹೊಣೆಯಾಧರಿತ ಬಳಕೆ ಮತ್ತು ಉತ್ಪಾದನೆ, ಹವಾಮಾನ, ಜಲಚರಗಳ ಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ, ಶಾಂತಿ-ನ್ಯಾಯ ಮತ್ತು ಶಕ್ತಿಯುತ ಸಂಸ್ಥೆಗಳು.* ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗಾಗಿ 16 ಗುರಿಗಳನ್ನು ನಿಗದಿಪಡಿಸಲಾಗಿದ್ದು, ಇವುಗಳ ಸುಧಾರಣೆಗೆ ಸರಕಾರವು ನೆರವು ನೀಡಿದೆ. ಜತೆಗೆ ಲಿಂಗ ತಾರತಮ್ಯವೂ ಕಡಿಮೆಯಾಗಿದೆ. ಸರಕಾರ ಕೈಗೊಂಡಿರುವ ಕ್ರಮಗಳಿಂದಾಗಿ ಉದ್ಯೋಗಾವಕಾಶಗಳೂ ಹೆಚ್ಚಿವೆ ಎಂದು ಬಿ.ವಿ.ಆರ್. ಸುಬ್ರಹ್ಮಣ್ಯಂ, ನೀತಿ ಆಯೋಗದ ಸಿಇಒ ಅವರು ತಿಳಿಸಿದ್ದಾರೆ. * ಸರಕಾರ ಕೈಗೊಂಡಿರುವ ಕ್ರಮಗಳು :- 4 ಕೋಟಿ: ಪಿ.ಎಂ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣ- 11 ಕೋಟಿ: ಗ್ರಾಮೀಣ ಪ್ರದೇಶದಲ್ಲಿ 2.23 ಲಕ್ಷ ಸಮುದಾಯ ಶೌಚಾಲಯಗಳ ನಿರ್ಮಾಣ- 10 ಕೋಟಿ: ಪಿ.ಎಂ ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ- 14.9 ಕೋಟಿ: ಜಲಜೀವನ್ ಮಿಷನ್‌ನಡಿ ನಲ್ಲಿ ಸಂಪರ್ಕ- 30 ಕೋಟಿ: ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯ ಫಲಾನುಭವಿಗಳು- 34 ಲಕ್ಷ ಕೋಟಿ: ಜನಧನ್ ಖಾತೆ ಮೂಲಕ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ* ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯಗಳ ಸ್ಥಾನ : - ಉತ್ತರಾಖಂಡ ಮತ್ತು ಕೇರಳ 79 ಅಂಕ ಪಡೆದಿದ್ದು ಮೊದಲ ಸ್ಥಾನ ಪಡೆದಿವೆ. - ತಮಿಳುನಾಡು (78) ಎರಡನೇ ಸ್ಥಾನ ಪಡೆದಿದೆ.- 77 ಅಂಕ ಪಡೆದಿರುವ ಗೋವಾ ಮತ್ತು ಹಿಮಾಚಲ ಪ್ರದೇಶವು ಜಂಟಿಯಾಗಿ ಮೂರನೇ ಸ್ಥಾನ ಹಂಚಿಕೊಂಡಿವೆ. - 76 ಅಂಕ ಗಳಿಸಿರುವ ಪಂಜಾಬ್ ಮತ್ತು ಸಿಕ್ಕಿಂ ಜಂಟಿಯಾಗಿ ನಾಲ್ಕನೇ ಸ್ಥಾನಕ್ಕೆ ಭಾಜನವಾಗಿವೆ. - 75 ಅಂಕ ಪಡೆದಿರುವ ಕರ್ನಾಟಕವು ಐದನೇ ಸ್ಥಾನ ಪಡೆದಿದೆ.