* ಸದನದಲ್ಲಿ ಮಾತನಾಡಲು ಅಥವಾ ಮತಚಲಾಯಿಸಲು ಲಂಚ ಪಡೆಯುವ ಶಾಸಕರು ಮತ್ತು ಸಂಸದರಿಗೆ ಕಾನೂನು ಕ್ರಮದಿಂದ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠವು ಸರ್ವಾನು ಮತದಿಂದತೀರ್ಮಾನವನ್ನು ನೀಡಿದೆ.  * ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾದ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ಮಂದಿ ನ್ಯಾಯಮೂರ್ತಿಗಳ ಪೀಠವು ನೀಡಿರುವ ಈ ತೀರ್ಪು ಮೈಲಿಗಲ್ಲು ಎಂದು ಬಿಂಬಿತವಾಗಿದೆ. * ಶಾಸನ ಸಭೆಗಳ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದರೆ ಅವರಲ್ಲಿನ ಲಂಚಗುಳಿತನವು ದೇಶದ ಸಂಸದೀಯ ಸಚಿವರ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಹಾಳಾಗುತ್ತದೆ ಎಂದು ಈ ತೀರ್ಪಿನ ಮೂಲಕ ತಿಳಿಸು ಬಡಿದೆ.* 1998ರಲ್ಲಿಕೋರ್ಟ್ ನೀಡಿದ ತೀರ್ಪಿನಲ್ಲಿನ ವ್ಯಾಖ್ಯಾನವು ಸಂವಿಧಾನದ 105 ಹಾಗೂ 194ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ವ್ಯಕ್ತಪಡಿಸಿದೆ . * ಸಂವಿಧಾನದ ಈ ಎರಡು (105 ಹಾಗೂ 194ನೇ) ವಿಧಿಗಳು ಸಂಸದರು ಹಾಗೂ ಶಾಸಕರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಇರುವ ಹಕ್ಕುಗಳ ಅಧಿಕಾರದ ಬಗ್ಗೆ ವಿವರಣೆ ನಿರೂಪಿಸಲಾಗಿದೆ.