* ಅಪರೂಪದ ಭೂಖನಿಜಗಳು ಮತ್ತು ಅತ್ಯಾಧುನಿಕ ತಯಾರಿಕಾ ಕ್ಷೇತ್ರಗಳಲ್ಲಿ ದೇಶೀಯ ಸ್ವಾವಲಂಬನೆಯನ್ನು ಸಾಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ (REPM) ತಯಾರಿಕಾ ಯೋಜನೆ’ಗೆ ನವೆಂಬರ್26, 2025 ರಂದು ಅನುಮೋದನೆ ನೀಡಿದೆ, ಈ ಯೋಜನೆಗೆ ₹7,280 ಕೋಟಿ ವೆಚ್ಚವಿದ್ದು, ದೇಶೀಯವಾಗಿ 6,000 ಮೆಟ್ರಿಕ್ ಟನ್ ಸಾಮರ್ಥ್ಯದ ಉತ್ಪಾದನೆಗೆ ಗುರಿ ಹಾಕಲಾಗಿದೆ, ಇದು ಎಲೆಕ್ಟ್ರಿಕ್ ವಾಹನಗಳು ಮತ್ತು ರಕ್ಷಣಾ ವಲಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸಲಿದೆ.ಈ ಯೋಜನೆ, ಆತ್ಮನಿರ್ಭರ ಭಾರತ ಹಾಗೂ 2047ರ ವಿಕಸಿತ ಭಾರತ ಗುರಿಗಳತ್ತ ಭಾರತವನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿದೆ.* ಈ ಯೋಜನೆಯ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಅಪರೂಪದ ಭೂಖನಿಜಗಳಿಗಾಗಿ ಸಂಪೂರ್ಣ ದೇಶೀಯ ತಯಾರಿಕಾ ವ್ಯವಸ್ಥೆ ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಶುದ್ಧ ಇಂಧನ, ಎಲೆಕ್ಟ್ರಿಕ್ ವಾಹನಗಳು, ಹೈ-ಟೆಕ್ ಕೈಗಾರಿಕೆಗಳು ಹಾಗೂ ರಕ್ಷಣಾ ಕ್ಷೇತ್ರಗಳಿಗೆ ಅಗತ್ಯವಾಗಿರುವ ಉನ್ನತ ಗುಣಮಟ್ಟದ ಮ್ಯಾಗ್ನೆಟ್‌ಗಳ ಉತ್ಪಾದನೆಗೆ ಇದು ಪ್ರಮುಖ ನೆರವಾಗಲಿದೆ.* ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ ಯೋಜನೆಯ ಮೂಲಕ ಅಪರೂಪದ ಭೂಖನಿಜಗಳಿಗಾಗಿ ಸ್ವಾವಲಂಬಿ ದೇಶೀಯ ಸರಬರಾಜು ವ್ಯವಸ್ಥೆಯನ್ನು ನಿರ್ಮಿಸಿ, ರೇರ್ ಅರ್ಥ್ ಆಕ್ಸೈಡ್‌ಗಳಿಂದ ಅಂತಿಮ ಮ್ಯಾಗ್ನೆಟ್ ಉತ್ಪಾದನೆವರೆಗೆ ಏಕೀಕೃತ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸುವುದರೊಂದಿಗೆ ವರ್ಷಕ್ಕೆ 6,000 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯವನ್ನು ಸೃಷ್ಟಿಸಿ, ದೇಶದಲ್ಲೇ ಉನ್ನತ ಗುಣಮಟ್ಟದ ಗೈಡೆಡ್ ಸಿಂಟರ್ಡ್ ಮ್ಯಾಗ್ನೆಟ್‌ಗಳ ಲಭ್ಯತೆಯನ್ನು ಖಚಿತಪಡಿಸುವುದೇ ಈ ಯೋಜನೆಯ ಪ್ರಮುಖ ಗುರಿಯಾಗಿದೆ.* ಈ ಯೋಜನೆಗೆ 7,000 ಕೋಟಿ ರೂಪಾಯಿಗೂ ಹೆಚ್ಚು ಹಣಕಾಸು ಮಂಜೂರು ಮಾಡಲಾಗಿದೆ. ಖನಿಜ ಸಂಸ್ಕರಣೆ, ಶುದ್ಧೀಕರಣದಿಂದ ಹಿಡಿದು ಅಂತಿಮ ತಯಾರಿಕೆಯವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಯೋಜನೆ ಒಳಗೊಂಡಿದೆ. ಅಪರೂಪದ ಭೂಖನಿಜಗಳು ಎಲೆಕ್ಟ್ರಿಕ್ ಮೊಬಿಲಿಟಿ, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಅತ್ಯಂತ ಅಗತ್ಯವಾಗಿವೆ.* ಸರ್ಕಾರದ ಪಾತ್ರ : ಯೋಜನೆಯ ಯಶಸ್ಸಿಗಾಗಿ ಗಣಿಗಾರಿಕೆ ಸಚಿವಾಲಯವು ಅಂತಾರಾಷ್ಟ್ರೀಯ ಸಹಕಾರದ ಮೂಲಕ ಕಚ್ಚಾ ವಸ್ತುಗಳ ಪೂರೈಕೆಯನ್ನು ಭದ್ರಪಡಿಸಿದೆ. ಆಸ್ಟ್ರೇಲಿಯಾ, ಅರ್ಜೆಂಟಿನಾ ಮತ್ತು ಜಾಂಬಿಯಾ ಸೇರಿದಂತೆ ಖನಿಜ ಸಂಪತ್ತಿನಿಂದ ಸಮೃದ್ಧ ರಾಷ್ಟ್ರಗಳೊಂದಿಗೆ ಭಾರತವು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಿಂದ ಜಾಗತಿಕ ಪೂರೈಕೆ ಅಡಚಣೆಗಳು ಹಾಗೂ ಭೌಗೋಳಿಕ ರಾಜಕೀಯ ಅಪಾಯಗಳಿಂದ ರಕ್ಷಣೆ ದೊರೆಯಲಿದೆ.* ಭಾರತದ ಆರ್ಥಿಕತೆಗೆ ಮಹತ್ವ : ಅಪರೂಪದ ಭೂಖನಿಜಗಳು ಎಲೆಕ್ಟ್ರಿಕ್ ವಾಹನಗಳ ಮೋಟಾರ್‌ಗಳು, ಗಾಳಿ ವಿದ್ಯುತ್ ಟರ್ಬೈನ್‌ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ರಕ್ಷಣಾ ಸಾಧನಗಳು ಹಾಗೂ ಏರೋಸ್ಪೇಸ್ ತಂತ್ರಜ್ಞಾನಗಳಿಗೆ ಅವಿಭಾಜ್ಯವಾಗಿವೆ. ಈ ಯೋಜನೆಯಿಂದ ಚೀನಾದಂತಹ ದೇಶಗಳ ಮೇಲೆ ಇರುವ ಆಮದು ಅವಲಂಬನೆ ಕಡಿಮೆಯಾಗುವುದರ ಜೊತೆಗೆ, ಸ್ವಚ್ಛ ಇಂಧನ ಪರಿವರ್ತನೆಗೆ ಬಲ ದೊರೆಯಲಿದೆ.* ಭಾರತದಲ್ಲಿ ಅಪರೂಪದ ಭೂಖನಿಜಗಳು : ಭಾರತದಲ್ಲಿ ಕರಾವಳಿ ಮರಳು, ಕೆಂಪು ಮರಳು ಹಾಗೂ ಒಳನಾಡಿನ ಅಲ್ಯೂವಿಯಲ್ ಪ್ರದೇಶಗಳಲ್ಲಿ ಅಪರೂಪದ ಭೂಖನಿಜಗಳು ಲಭ್ಯವಿವೆ. ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಜಾರ್ಖಂಡ್, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಈ ಖನಿಜ ಸಂಪತ್ತಿನಲ್ಲಿ ಪ್ರಮುಖ ಸ್ಥಾನ ಹೊಂದಿವೆ.* ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ ಯೋಜನೆ ಭಾರತವನ್ನು ತಂತ್ರಜ್ಞಾನ ಮತ್ತು ಖನಿಜ ಕ್ಷೇತ್ರಗಳಲ್ಲಿ ಸ್ವಾವಲಂಬಿ ರಾಷ್ಟ್ರವಾಗಿಸುವ ದಿಕ್ಕಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.