Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಶ್ರೀಲಂಕಾ – ‘ಸಾಗರಬಂಧು’ ಕಾರ್ಯಾಚರಣೆಯಿಂದ ಭಾರತೀಯರ ರಕ್ಷಣೆ
2 ಡಿಸೆಂಬರ್ 2025
* ‘ದ್ವಿತಾ’ ಚಂಡಮಾರುತದಿಂದಾಗಿ ತತ್ತರಿಸಿರುವ
ಶ್ರೀಲಂಕಾದಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ತರುವ ಕಾರ್ಯಾಚರಣೆಯನ್ನು ಭಾರತ ‘ಸಾಗರಬಂಧು’ ಎಂಬ ಹೆಸರಿನಲ್ಲಿ ಕೈಗೊಂಡಿದೆ.
ಈ ಕಾರ್ಯಾಚರಣೆಯಲ್ಲಿ
104 ಭಾರತೀಯರನ್ನು ವಾಯುಪಡೆಯ ವಿಶೇಷ ಯುದ್ಧವಿಮಾನ
ಬಳಸಿ ಕೊಲಂಬೊದ
ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುವನಂತಪುರಕ್ಕೆ
ಕರೆತರಲಾಗಿದೆ ಎಂದು ಭಾರತದ ಹೈಕಮಿಷನ್ ಮಾಹಿತಿ ನೀಡಿದೆ.
* ಭಾರತವು ಕೇವಲ ನಾಗರಿಕರನ್ನು ರಕ್ಷಿಸುವಷ್ಟರಲ್ಲದೆ,
ಶ್ರೀಲಂಕಾದಲ್ಲಿ ನಡೆಯುತ್ತಿರುವ ರಕ್ಷಣಾ ಮತ್ತು ನೆರವು ಕಾರ್ಯಾಚರಣೆಗೂ ತನ್ನ ಸಹಕಾರವನ್ನು ವಿಸ್ತರಿಸಿದೆ.
-ಭಾರತೀಯ ವಾಯುಪಡೆಯ
ಚೇತಕ್ ಹೆಲಿಕಾಪ್ಟರ್ಗಳು
ಪ್ರವಾಹ ಮತ್ತು ಭೂಕುಸಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ.
- ರಸ್ತೆ ಸಂಪರ್ಕ ಕಡಿತಗೊಂಡಿರುವ
ಕೊಟ್ಮಲೆ ಗುಡ್ಡಪ್ರದೇಶದಲ್ಲೂ
ರಕ್ಷಣಾ ಕಾರ್ಯ ಜೋರಾಗಿದೆ.
- ಭಾರತದಿಂದ ಕಳುಹಿಸಲಾದ
ಎನ್ಡಿಆರ್ಎಫ್ ತಂಡ
ಕೊಲಂಬೊ ಹಾಗೂ ಕೋಚಿಕಡೆ ಭಾಗದಲ್ಲಿ ಕಾರ್ಯಪ್ರವೃತ್ತವಾಗಿದೆ.
ನೆರವು ನೀಡುವ ಸಂದರ್ಭದಲ್ಲೇ ದುರ್ಘಟನೆ ಸಂಭವಿಸಿದೆ:
ಶ್ರೀಲಂಕಾದ ವೆನ್ನಪ್ಪುವ ಕರಾವಳಿಯಲ್ಲಿ ಪರಿಹಾರ ಸಾಮಗ್ರಿಗಳನ್ನು ತಲುಪಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಒಬ್ಬ ಪೈಲಟ್ ಮೃತಪಟ್ಟಿದ್ದು ಐವರ ಸ್ಥಿತಿ ಗಂಭೀರವಾಗಿದೆ. ಇದೆ ವೇಳೆ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಶ್ರೀಲಂಕಾ ನೌಕಾಪಡೆಯ ಐವರು ನಾವಿಕರ ಮೃತದೇಹಗಳೂ ಪತ್ತೆಯಾಗಿವೆ.
* ಇಂಡೋನೇಷ್ಯಾ – ಪ್ರವಾಹ ಮತ್ತು ಭೂಕುಸಿತ ಬಾಲೆಗೆ ಬಲಿಯಾದ ಜನರು :
ಭಾರೀ ಮಳೆ ಮತ್ತು ಭೂಕುಸಿತಗಳಿಂದಾಗಿ ಇಂಡೋನೇಷ್ಯಾದಲ್ಲಿ ಉಂಟಾದ ನಾಶನ ಭೀಕರ ಮಟ್ಟದಲ್ಲಿದೆ.
* ಮೃತರ ಸಂಖ್ಯೆ 593ಕ್ಕೆ ಏರಿಕೆಯಾಗಿದೆ
ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಈ ದುರಂತದಲ್ಲಿ:
468 ಜನರು ನಾಪತ್ತೆಯಾಗಿದ್ದಾರೆ,
5,78,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಹಲವು ಪ್ರದೇಶಗಳಲ್ಲಿ ರಸ್ತೆ, ಸೇತುವೆ ಮತ್ತು ಮನೆಗಳು ಜಲಾವೃತವಾಗಿದ್ದು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.
* ಇದು ಇಂಡೋನೇಷ್ಯಾದ ಇತ್ತೀಚಿನ ಇತಿಹಾಸದಲ್ಲಿನ ದೊಡ್ಡ ಪ್ರವಾಹ–ಭೂಕುಸಿತ ದುರಂತಗಳಲ್ಲಿ ಒಂದಾಗಿದೆ.
Take Quiz
Loading...