* ಶಿರಾದಲ್ಲಿ ರಾಜ್ಯದ ಪ್ರಥಮ ಪ್ರಯೋಗವಾಗಿ, ನೀರಿನ ಸಂರಕ್ಷಣೆ ಮತ್ತು ಸೊಳ್ಳೆಗಳ ನಿರ್ಮೂಲನೆಗಾಗಿ ಬ್ಯಾಸಿಲಸ್ ಕನ್ಸೋರ್ಟಿಯಂನ ಬ್ಯಾಕ್ಟೀರಿಯಲ್ ಬಳಸಿ ಕೊಳಚೆ ನೀರನ್ನು ಶುದ್ಧೀಕರಿಸಲಾಗುತ್ತಿದೆ.* ಈ ಪ್ರಯೋಗ ಯಶಸ್ವಿಯಾದರೆ, ದೇಶವ್ಯಾಪಿಯಾಗಿ ನೀರಿನ ಸಂರಕ್ಷಣೆಗೆ ಸಹಾಯವಾಗಲಿದೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.* ಬ್ಯಾಸಿಲಸ್ ಕನ್ಸೋರ್ಟಿಯಂ ಬ್ಯಾಕ್ಟೀರಿಯಾ ದ್ರಾವಣವನ್ನು ಜಾಜಮ್ಮನ ಕಟ್ಟೆಯ ಕೊಳಚೆ ನೀರಿನಲ್ಲಿ ಪ್ರಯೋಗಿಸಿದರೆ, ಹದಿನೈದು ದಿನಗಳೊಳಗೆ ನೀರು ಸ್ವಚ್ಛವಾಗಿ ಸೊಳ್ಳೆಗಳ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಮಿರಾಕಲ್ ಇನ್ ವಾಟರ್ ಸಲ್ಯೂಷನ್ ಕಂಪನಿಯ ಡೈರೆಕ್ಟರ್ ಸ್ಟಿಫನ್ ಕೆ ರಾಜ್ ಅವರ ತಿಳಿಸಿದ್ದಾರೆ.* ಕೈಗಾರಿಕೆ ಮತ್ತು ಮನೆಗಳಿಂದ ಬರುವ ತ್ಯಾಜ್ಯನೀರು ಪರಿಸರ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದನ್ನು ನಿಭಾಯಿಸಲು, ನೀರನ್ನು ಶುದ್ಧಗೊಳಿಸುವ ಬ್ಯಾಸಿಲಸ್ ಕನ್ಸೋರ್ಟಿಯಂನ ಬ್ಯಾಕ್ಟೀರಿಯಲ್ ದ್ರಾವಣ ಸಂಶೋಧಿಸಲಾಗಿದೆ. ಇದು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ. ಸೊಳ್ಳೆಗಳನ್ನು ನಾಶಮಾಡಿ ಪರಿಸರ ಸ್ನೇಹಿಯಾಗಿ ನೀರನ್ನು ಶುದ್ಧಗೊಳಿಸುತ್ತದೆ.* ಶಿರಾ ನಗರಸಭಾ ವ್ಯಾಪ್ತಿಯಲ್ಲಿ ಮೊದಲ ಬಾರಿ ಪರೀಕ್ಷೆ ನಡೆಸಿ, ಫಲಿತಾಂಶ ಆಧರಿಸಿ ಮುಂದಿನ ಪ್ರಯೋಗಗಳ ಬಗ್ಗೆ ತೀರ್ಮಾನಿಸಲಾಗುವುದು.