➤ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ - 2025 ಪ್ರಶಸ್ತಿಗೆ ಖ್ಯಾತ ಬಂಗಾಳಿ ಸಾಹಿತಿ ರಾಮ್‌ ಕುಮಾರ್ ಮುಖ್ಯೋಪಾಧ್ಯಾಯ ಅವರು ಆಯ್ಕೆಯಾಗಿದ್ದಾರೆ. ಕೆ.ಕೆ. ಬಿರ್ಲಾ ಫೌಂಡೇಶನ್ ನೀಡುವ ಈ ಗೌರವವು ಅವರ ಪೌರಾಣಿಕ ಹಿನ್ನೆಲೆಯ 'ಹರ ಪಾರ್ವತಿ ಕಥಾ' (Hara Parvati Katha) ಕಾದಂಬರಿಗೆ ಸಂದಿದೆ. ಮಾರ್ಚ್ 2026ರಲ್ಲಿ ನಡೆದ ಪ್ರಶಸ್ತಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಭಾರತೀಯ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಈ ಮೂಲಕ ಗೌರವಿಸಲಾಗಿದೆ. ➤ ಕಾದಂಬರಿಯ ಹೂರಣ: 'ಹರ ಪಾರ್ವತಿ ಕಥಾ' ಕಾದಂಬರಿಯು ಶಿವ ಮತ್ತು ಪಾರ್ವತಿಯ ಕುರಿತಾದ ಪೌರಾಣಿಕ ಕಥಾಹಂದರವನ್ನು ಹೊಂದಿದೆ. ಕೇವಲ ಪುರಾಣದ ಕಥೆಯನ್ನಷ್ಟೇ ಹೇಳದೆ, ಆಧುನಿಕ ಸಾಹಿತ್ಯದ ದೃಷ್ಟಿಕೋನದಲ್ಲಿ ಶಿವ-ಶಕ್ತಿಯ ಸಂಬಂಧ ಮತ್ತು ತಾತ್ವಿಕ ಅಂಶಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ. ರಾಮ್‌ ಕುಮಾರ್ ಮುಖ್ಯೋಪಾಧ್ಯಾಯ ಅವರು ಬಂಗಾಳಿ ಸಾಹಿತ್ಯ ಲೋಕದಲ್ಲಿ ಈಗಾಗಲೇ ಪ್ರಸಿದ್ಧರಾಗಿದ್ದು, ಈ ಪ್ರಶಸ್ತಿಯು ಅವರ ಸಾಹಿತ್ಯಿಕ ಸಾಧನೆಗೆ ಸಂದ ದೊಡ್ಡ ಮನ್ನಣೆಯಾಗಿದೆ.➤ 'ಸರಸ್ವತಿ ಸಮ್ಮಾನ್' ಭಾರತದ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದನ್ನು 1991ರಲ್ಲಿ ಕೆ.ಕೆ. ಬಿರ್ಲಾ ಫೌಂಡೇಶನ್ ಸ್ಥಾಪಿಸಿದ್ದು, ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾರತೀಯ ಭಾಷೆಗಳ ಕಳೆದ ಹತ್ತು ವರ್ಷಗಳಲ್ಲಿ ಪ್ರಕಟವಾದ ಅತ್ಯುತ್ತಮ ಸಾಹಿತ್ಯ ಕೃತಿಗೆ ಪ್ರತಿವರ್ಷ ನೀಡಲಾಗುತ್ತದೆ. ಈ ಪ್ರಶಸ್ತಿಯು 15 ಲಕ್ಷ ರೂಪಾಯಿ ನಗದು ಮೊತ್ತ, ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ. 1991ರಲ್ಲಿ ಈ ಗೌರವಕ್ಕೆ ಪಾತ್ರರಾದ ಮೊದಲ ಸಾಹಿತಿ ಖ್ಯಾತ ಹಿಂದಿ ಲೇಖಕ ಹರಿವಂಶರಾಯ್ ಬಚ್ಚನ್.➤ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಇದುವರೆಗೆ ಒಟ್ಟು ಇಬ್ಬರು ಕನ್ನಡಿಗರು ಪಡೆದಿದ್ದಾರೆ.1. ಎಸ್. ಎಲ್. ಭೈರಪ್ಪ: ಮಂದ್ರ (Mandra) ಕೃತಿ : 2010 : ಕಾದಂಬರಿ 2. ಎಂ. ವೀರಪ್ಪ ಮೊಯ್ಲಿ ಶ್ರೀ ರಾಮಾಯಣ ಮಹಾನ್ವೇಷಣಂ ಕೃತಿ: 2014 : ಮಹಾಕಾವ್ಯ