* ಭಾರತದಲ್ಲಿ ಮಹಿಳಾ ಸಬಲೀಕರಣ ಮತ್ತು ನೈರ್ಮಲ್ಯ ಪ್ರಮಾಣ ಹೆಚ್ಚಿಸಲು ವಿನೂತನವಾದ 'ಕ್ಷೇಮ' ಯೋಜನೆಗೆ ಕೇಂದ್ರ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದ್ದಾರೆ. * ಈ ಯೋಜನೆ ಅಡಿಯಲ್ಲಿ, ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ವೆಂಡಿಂಗ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. * ಈ ಯೋಜನೆ ಸಕ್ರಿಯ ಚಾರಿಟೇಬಲ್ ಟ್ರಸ್ಟ್ ಈ ಉಪಕ್ರಮವನ್ನು ಪ್ರಾರಂಭಿಸಿದ್ದು, ಆರಂಭದಲ್ಲಿ ಆಟೋ-ರಿಕ್ಷಾಗಳಲ್ಲಿ ಇದನ್ನು ಅಳವಡಿಸಲಾಗಿದೆ. * ಈ ವಿನೂತನ ಉಪಕ್ರಮವು ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವುದರೊಂದಿಗೆ, ನೈರ್ಮಲ್ಯ ಉತ್ಪನ್ನಗಳ ಸುಲಭ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ. ಇದರಿಂದ, ಮಹಿಳೆಯರು ಹೆಚ್ಚಿನ ಘನತೆ ಮತ್ತು ಸ್ವಾತಂತ್ರ್ಯದೊಂದಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೇರಿತರಾಗುತ್ತಾರೆ. ಶ್ರೀಮತಿ ಅನಿತಾ ರಾವ್ ಅವರ ದೃಷ್ಟಿಕೋನ ಮತ್ತು ಸಮರ್ಪಣೆಗೆ ಸಚಿವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.