Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕಮ್ಯುನಿಸ್ಟ್ ಚಳವಳಿಯ 'ಧ್ರುವತಾರೆ', ಶತಾಯುಷಿ ಆರ್. ನಲ್ಲಕಣ್ಣು ನಿಧನ: ಆದರ್ಶದ ಬದುಕಿಗೆ ತೆರೆ
Authored by:
Akshata Halli
Date:
26 ಫೆಬ್ರುವರಿ 2026
➤
ಚೆನ್ನೈ:
ಭಾರತದ ಸ್ವಾತಂತ್ರ್ಯ ಹೋರಾಟದ ಕೊಂಡಿ, ಕಮ್ಯುನಿಸ್ಟ್ ಚಳವಳಿಯ ಅಪ್ರತಿಮ ನಾಯಕ ಮತ್ತು ಸರಳತೆಯ ಸಾಕಾರ ಮೂರ್ತಿಯಾಗಿದ್ದ
ಆರ್. ನಲ್ಲಕಣ್ಣು (101)
ಅವರು ಫೆಬ್ರವರಿ 25, 2026ರ ಬುಧವಾರದಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ತಮ್ಮ ಬದುಕಿನ 80ಕ್ಕೂ ಹೆಚ್ಚು ವರ್ಷಗಳನ್ನು ಜನಪರ ಹೋರಾಟಕ್ಕಾಗಿಯೇ ಮೀಸಲಿಟ್ಟಿದ್ದ 'ಆರ್.ಎನ್.ಕೆ' ಅವರ ಅಗಲಿಕೆ ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ.
➤
ಆರ್. ನಲ್ಲಕಣ್ಣು:
1925ರಲ್ಲಿ ತೂತುಕುಡಿ ಜಿಲ್ಲೆಯ ಶ್ರೀವೈಕುಂಠಂನಲ್ಲಿ ಜನಿಸಿದ ನಲ್ಲಕಣ್ಣು ಅವರು, ವಿದ್ಯಾರ್ಥಿ ದೆಸೆಯಲ್ಲೇ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಆಕರ್ಷಿತರಾಗಿ 18ನೇ ವಯಸ್ಸಿನಲ್ಲೇ ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಸೇರಿದರು. 1949ರಲ್ಲಿ ನೆಹರೂ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಈ ವೇಳೆ ಅವರು ಅನುಭವಿಸಿದ ಪೊಲೀಸ್ ಚಿತ್ರಹಿಂಸೆಗಳು ಅತೀವವಾಗಿದ್ದವು.
➤
ತಮ್ಮ 80ನೇ ಜನ್ಮದಿನದಂದು ಪಕ್ಷದ ಕಾರ್ಯಕರ್ತರು ನೀಡಿದ ₹1 ಕೋಟಿ ದೇಣಿಗೆಯನ್ನು ಪಕ್ಷಕ್ಕೇ ಮರಳಿಸಿ, 2022ರಲ್ಲಿ ತಮಿಳುನಾಡು ಸರ್ಕಾರ ನೀಡಿದ 'ತಗೈಸಾಲ್ ತಮಿಳರ್' ಪ್ರಶಸ್ತಿಯ ₹10 ಲಕ್ಷ ನಗದು ಮೊತ್ತವನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿ, ಅಂತಿಮವಾಗಿ ತಮ್ಮ ದೇಹವನ್ನೂ ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡುವ ಮೂಲಕ ಆರ್. ನಲ್ಲಕಣ್ಣು ಅವರು ಹಣ ಮತ್ತು ಅಧಿಕಾರದ ಆಸೆ ತೊರೆದ ಅಪರೂಪದ ನಿಸ್ವಾರ್ಥ ಜನನಾಯಕನಾಗಿ ಅಜರಾಮರರಾಗಿದ್ದಾರೆ.
➤
1995ರಲ್ಲಿ ದಕ್ಷಿಣ ತಮಿಳುನಾಡಿನಲ್ಲಿ ಜಾತಿ ಸಂಘರ್ಷ ತಾರಕಕ್ಕೇರಿದ್ದಾಗ, ನಲ್ಲಕಣ್ಣು ಅವರ ಮಾವ ಅಣ್ಣಾಸಾಮಿ (84) ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಸುದ್ದಿಯನ್ನು ಕೇಳಿಯೂ ಅವರು ಕುಗ್ಗಲಿಲ್ಲ. ಸ್ವಂತ ಕುಟುಂಬದ ಅಂತ್ಯಕ್ರಿಯೆಗೆ ಹೋಗುವ ಬದಲು, ಸಂಘರ್ಷ ಪೀಡಿತ ಗ್ರಾಮಗಳಲ್ಲಿ ಶಾಂತಿ ಮೆರವಣಿಗೆ ನಡೆಸಿ ಸಾಮರಸ್ಯ ಮೂಡಿಸಲು ಶ್ರಮಿಸಿದ ಮಹಾನ್ ಚೇತನ ಇವರು.
➤
ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಸ್ಪರ್ಧಿಸಿದ್ದು ಕೇವಲ ಒಂದು ಬಾರಿ ಮಾತ್ರ. 1999ರ ಲೋಕಸಭಾ ಚುನಾವಣೆಯಲ್ಲಿ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಸಿ.ಪಿ. ರಾಧಾಕೃಷ್ಣನ್ (ಪ್ರಸ್ತುತ ಉಪರಾಷ್ಟ್ರಪತಿ) ಅವರ ವಿರುದ್ಧ ಪರಾಭವಗೊಂಡಿದ್ದರು. ಆರ್. ನಲ್ಲಕಣ್ಣು ಅವರ ಬದುಕು ಇಂದಿನ ಯುವ ರಾಜಕಾರಣಿಗಳಿಗೆ ಒಂದು ಪಾಠ. ಸಿದ್ಧಾಂತದ ಮೇಲಿನ ನಿಷ್ಠೆ ಮತ್ತು ನೈತಿಕತೆಯ ಬದುಕು ಹೇಗಿರಬೇಕು ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದರು. ಅವರ ನಿಧನಕ್ಕೆ ವಿವಿಧ ಪಕ್ಷದ ಮುಖಂಡರು ಕಂಬನಿ ಮಿಡಿದಿದ್ದಾರೆ.
Take Quiz
Loading...