* ವಿಶ್ವದಾದ್ಯಂತ ಜಾಗತಿಕ ಅರಣ್ಯ ನಾಶದ ಪ್ರಮಾಣವು ಹೆಚ್ಚಾಗುತ್ತಿದ್ದು,1990 ರಿಂದ 2015 ರ ಅವಧಿಯಲ್ಲಿ ವಿಶ್ವದ ಶೇ.3 ರಷ್ಟು ಅರಣ್ಯ ಪ್ರದೇಶ ನಾಶವಾಗಿದೆ.ಮುಖ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಅರಣ್ಯ ನಾಶ ಹೆಚ್ಚಾಗಿದ್ದು,ಇದು ಹವಾಮಾನ ಬದಲಾವಣೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.* ಅರಣ್ಯ ನಾಶದಿಂದ ಪರಿಸರ ಸಮತೋಲನ ಹಾಳಾಗುತ್ತಿದು,ಮಾನವ ಜೀವನ ಮತ್ತು ಹವಾಮಾನ ಬದಲಾವಣೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿವೆ ಎಂದು ಇತ್ತೀಚಿಗೆ ಬಿಡುಗಡೆಯಾದ "ಫಾರೆಸ್ಟ ಡಿಕ್ಲ್ ರೇಷನ್ ಅಸೆಸ್ಮೆಂಟ್ "ವರದಿ ಎಚ್ಚರಿಸಿದೆ.ಮುಖ್ಯ ಕಾರಣಗಳು :* ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು * ಅಭಿವೃದ್ಧಿ ಯೋಜನೆಗಳು * ಜನಸಂಖ್ಯಾ ಬೆಳವಣಿಗೆ * ಇಂಧನ ಮತ್ತು ಮರದ ಬಳಕೆ ಪರಿಣಾಮಗಳು :* ಹವಾಮಾನ ಬದಲಾವಣೆ * ಜೀವವೈವಿಧ್ಯತೆಯ ನಷ್ಟ * ಪರಿಸರ ವ್ಯವಸ್ಥೆಗಳ ಮೇಲೆ ಪರಿಣಾಮ * ಅರಣ್ಯ ಸಂರಕ್ಷಣಾ ಕ್ರಮಗಳು :* ಸುಸ್ಥಿರ ಅರಣ್ಯ ನಿರ್ವಹಣೆ * ಅಂತರರಾಷ್ಟ್ರಿಯ ಸಹಕಾರ * ಅರಣ್ಯ ಕರಣ * ಅರಣ್ಯ ಮತ್ತು ಪರಿಸರ ಹಾನಿ ಸರಿಪಡಿಸಲು ಸಿಓಪಿ -26 ರ ವೇಳೆ ರಾಷ್ಟ್ರಗಳು ಶೇ.30 ರಷ್ಟು ಹಾಳಾದ ಪ್ರದೇಶಗಳನ್ನು ಪುನರ ಸ್ಥಾಪನೆ ಮಾಡುವ ಗುರಿ ಇಟ್ಟಿದ್ದವು.ಆದರೆ ಪ್ರಸ್ತುತ ಕೇವಲ 10 .6 ಮಿಲಿಯನ್ ಹೆಕ್ಟರ ಪ್ರದೇಶದಲ್ಲಿ ಮಾತ್ರ ಪುನರ ಸ್ಥಾಪನೆಗೆ ಕೆಲಸ ನಡೆಯುತ್ತಿದೆ ಎಂದು ವರದಿ ಹೇಳಿದೆ.*  ಭಾರತ ಸರಕಾರ ತಿದ್ದುಪಡಿ ಮಡಿದ ಅರಣ್ಯ ಸಂರಕ್ಷಣಾ ಕಾಯಿದೆಯಡಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಆದರೆ,ಈ ನಿಯಮಗಳು ಅರಣ್ಯ ಅವಲಂಬಿತ ಸಮುದಾಯಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ವರದಿ ತಿಳಿಸಿದೆ. * 2021 ರಲ್ಲಿ ಗ್ಲಾಸ್ಗೋ ದಲ್ಲಿ ನಡೆದ ಸಿಓಪಿ-26 ಸಮ್ಮೇಳನದಲ್ಲಿ ಹಲವು ರಾಷ್ಟ್ರಗಳು 2030 ರೊಳಗೆ ಅರಣ್ಯ ನಾಶ ಮತ್ತು ಅರಣ್ಯ ಹಾನಿಯನ್ನು ಸಂಪೂರ್ಣ ನಿಲ್ಲಿಸುವುದಾಗಿ ಘೋಷಿಸಿದ್ದವು.* ಕಳೆದ ವರ್ಷ 8 .1 ಮಿಲಿಯನ್ ಹೆಕ್ಟರ ಅರಣ್ಯ ನಾಶವಾಗಿದ್ದು,ಅದರಲ್ಲೂ,6 .73 ಮಿಲಿಯನ್ ಹೆಕ್ಟರ ಉಷ್ಣವಲಯ ಅರಣ್ಯ ವಲಯಗಳು ನಾಶವಾಗಿವೆ.* 2024 - 25 ರಲ್ಲಿ ಭಾರತದಲ್ಲಿ ಸುಮಾರು 1 .5 ಕೋಟಿ ಜನರು ಕಾಡ್ಗಿಚ್ಚಿನ ಅಪಾಯಕ್ಕೆ ಸಿಲಿಕ್ಕಿದ್ದರು.ಉತ್ತರ ಪ್ರದೇಶವು ದಾಖಲೆಯ ಕಾಡ್ಗಿಚ್ಚಿಗೆ ಒಳಗಾಗಿದೆ.* ಅರಣ್ಯ ನಾಶದಿಂದ ಜೀವವೈವಿಧ್ಯತೆ ಸಂಕುಲನ ನಾಶಕ್ಕೆ ಕಾರಣವಾಗುತ್ತದೆ.( ಕಾಡು ಉಳಿಸಿ ನಾಡು ಬೆಳೆಸಿ ).* ತೀವ್ರ ಬಿಸಿಲಿನ ಶಾಖ,ಕೃಷಿ ತ್ಯಾಜ್ಯ ಸುಡುವುದರಿಂದ ಭೂಮಿಯಲ್ಲಿ ಶಾಖ ಉತ್ಪಾದನೆ ಹೆಚ್ಚಾಗಿ ಒಣ ಇಂಧನ ಉತ್ಪತ್ತಿಯಾಗುತ್ತದೆ.ಇದರಿಂದ ಬೆಳೆಸುಡುವಿಕೆ,ಕಾಡ್ಗಿಚ್ಚು ಉಂಟಾಗುತ್ತದೆ ಎಂದು  ಸಂಶೋಧಕರು ಹೇಳಿದ್ದಾರೆ.* ಮಹಿಳೆಯರ ಭಾಗವಹಿಸುವಿಕೆ ಇದ್ದಲ್ಲಿ,ಅರಣ್ಯ ಸಂರಕ್ಷಣೆಯಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ವರದಿ ಉಲ್ಲೇಖಿಸಿದೆ.