* ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಿದ್ಧತೆಗಳು ಭರದಿಂದ ಸಾಗಿದ್ದು, ಜನವರಿ 22ರ ಸಮಾರಂಭದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಜನವರಿ 18 ರಂದು ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು.* ಅಂಚೆಚೀಟಿಯ ವಿನ್ಯಾಸಗಳಲ್ಲಿ ರಾಮ ಮಂದಿರ,ಚೌಪಾಯಿ ‘ಮಂಗಳ ಭವನ ಅಮಂಗಳ ಹರಿ’,ಸೂರ್ಯ, ಸರಯೂ ನದಿ ಹಾಗೂ ಮಂದಿರದಲ್ಲಿನ ಮತ್ತು ಸುತ್ತುಮುತ್ತಲಿನ ಶಿಲ್ಪಗಳು ಸೇರಿವೆ.* ರಾಮಮಂದಿರ, ಗಣೇಶ, ಹುನುಮಂತ, ಜಟಾಯು, ಕೇವತ್ ರಾಜ್ ಮತ್ತು ಶಬರಿಯ ಚಿತ್ರಗಳಿರುವ ಒಟ್ಟು ಆರು ಅಂಚೆ ಚೀಟಿಗಳನ್ನು ಅವರು ಬಿಡುಗಡೆ ಮಾಡಿದರು..* ಜಗತ್ತಿನಾದ್ಯಂತ ಈ ವರೆಗೆ ಬಿಡುಗಡೆ ಯಾಗಿರುವ ಶ್ರೀರಾಮನ ಚಿತ್ರವಿರುವ ಅಂಚೆ ಚೀಟಿಗಳ ಕುರಿತು ಮಾಹಿತಿ ಒಳಗೊಂಡಿರುವ ಪುಸ್ತಕವನ್ನೂ ಅವರು ಈ ವೇಳೆ ಬಿಡುಗಡೆಗೊಳಿಸಿರು.* ರಾಮಮಂದಿರ ಅಂಚೆ ಚೀಟಿಯಲ್ಲಿ 'ಮಂಗಲ್ ಭವನ್ ಅಮಂಗಲ್ ಹಾರಿ' ಎಂದು ಬರೆಯಲಾಗಿದೆ. ರಾಮ, ಸೀತಾ ಮತ್ತು ರಾಮಾಯಣವು ಕಾಲ, ಸಮಾಜ, ಜಾತಿ, ಧರ್ಮ ಹಾಗೂ ಪ್ರದೇಶಗಳನ್ನು ಮೀರಿ ಜನರಿಗೆ ಪ್ರಿಯವಾದ ವಿಚಾರಗಳಾಗಿವೆ. * ಅಂಚೆ ಚೀಟಿ ಪುಸ್ತಕದಲ್ಲಿ ಶ್ರೀರಾಮನ ಅಂತಾರಾಷ್ಟ್ರೀಯ ಛಾಪನ್ನು ಪ್ರದರ್ಶಿಸುವ 48 ಪುಟಗಳ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಯುಎಸ್, ನ್ಯೂಜಿಲೆಂಡ್, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಮತ್ತು ಯುಎನ್‌ನಂತಹ ಸಂಸ್ಥೆಗಳು ಸೇರಿ 20 ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನು ಒಳಗೊಂಡಿದೆ.* ಅಯೋಧ್ಯೆ ಮತ್ತು ಪ್ರಮುಖ ಹತ್ತಿರದ ಪ್ರದೇಶಗಳಿಗೆ ಹವಾಮಾನ ಸಂಬಂಧಿತ ಮಾಹಿತಿಯನ್ನು ಒದಗಿಸಲು ಮೀಸಲಾದ ವೆಬ್‌ಪುಟವನ್ನು ಗುರುವಾರ (ಜನವರಿ.18) ಪ್ರಾರಂಭಿಸಿದೆ. ವೆಬ್‌ಪುಟವು ತಾಪಮಾನ ಸೇರಿ ಎಲ್ಲ ಹವಾಮಾನ ಮಾಹಿತಿಯನ್ನು ಒಳಗೊಂಡಿದೆ. ಈ ಮಾಹಿತಿಯು ಹಿಂದಿ, ಇಂಗ್ಲಿಷ್, ಉರ್ದು, ಚೈನೀಸ್, ಫ್ರೆಂಚ್ ಮತ್ತು ಸ್ಪ್ಯಾನಿಷ್‌ನಂತಹ ಪ್ರಪಂಚದಾದ್ಯಂತ ಮಾತನಾಡುವ ಪ್ರಮುಖ ಭಾಷೆಗಳಲ್ಲಿ ಲಭ್ಯ ಇದೆ.* ಈ ವೆಬ್ ಸಂಪುಟವು ಏಳು ದಿನಗಳ ಮುನ್ಸೂಚನೆ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವನ್ನು ಒಳಗೊಂಡಿರುವ ಹವಾಮಾನ ಬುಲೆಟಿನ್ ಬಳಕೆದಾರರಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿಯೂ ಲಭ್ಯವಿರುತ್ತದೆ.