Job Description: ➤ ರಾಷ್ಟ್ರ ರಾಜಧಾನಿ ವಲಯದ (NCR) ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಮತ್ತು ಮೀರತ್ ನಡುವಿನ ಸಂಪೂರ್ಣ 82 ಕಿಮೀ ಉದ್ದದ ನಮೋ ಭಾರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್ ಅನ್ನು ಉದ್ಘಾಟಿಸುವುದರೊಂದಿಗೆ, ಭಾರತದ ಮೊದಲ ಸೆಮಿ-ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ಈಗ ಸಾರ್ವಜನಿಕರಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಿದೆ.ಈ ಹಿಂದೆ ದೆಹಲಿಯಿಂದ ಮೀರತ್ ತಲುಪಲು 3-4 ಗಂಟೆ ಬೇಕಾಗುತ್ತಿತ್ತು, ಈಗ ಕೇವಲ ಒಂದು ಗಂಟೆಯೊಳಗೆ ತಲುಪಬಹುದು.➤ ಮೀರತ್ ಮೆಟ್ರೋ ಜೊತೆ ಸಮನ್ವಯ: ವಿಶೇಷವೆಂದರೆ, ವಿಶ್ವದಲ್ಲೇ ಮೊದಲ ಬಾರಿಗೆ ನಮೋ ಭಾರತ್ ರೈಲು ಮತ್ತು ಮೀರತ್ ಮೆಟ್ರೋ ಒಂದೇ ಹಳಿ ಮತ್ತು ಒಂದೇ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳಲಿವೆ. ಇದರಿಂದ ಮೀರತ್ ನಗರದ ಒಳಗಿನ ಸಂಚಾರ ಮತ್ತು ದೆಹಲಿಗೆ ಹೋಗುವ ಸಂಚಾರ ಎರಡೂ ಸುಲಭವಾಗಲಿದೆ.➤ ನಮೋ ಭಾರತ್ ಕಾರಿಡಾರ್ ಉದ್ಯೋಗಾವಕಾಶ ಹೆಚ್ಚಿಸುವ ಮೂಲಕ ಆರ್ಥಿಕ ಪ್ರಗತಿಗೆ, ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ನೀಡುವ ಮೂಲಕ ಸಾಮಾಜಿಕ ಸಬಲೀಕರಣಕ್ಕೆ ನಾಂದಿ ಹಾಡಿದೆ.➤ ಭವಿಷ್ಯದ ಯೋಜನೆಗಳು: ಹೊಸ ಕಾರಿಡಾರ್‌ಗಳು: ಕೇಂದ್ರ ಸಚಿವ ಮನೋಹರ್ ಲಾಲ್ ಅವರು ಮುಂದಿನ ಹಂತದಲ್ಲಿ ಎರಡು ಹೊಸ ಕಾರಿಡಾರ್‌ಗಳ ಬಗ್ಗೆ ಸುಳಿವು ನೀಡಿದ್ದಾರೆ:1.ದೆಹಲಿ (ಸಾರಾಯ್ ಕಾಲೇ ಖಾನ್) - ಕರ್ನಾಲ್ (ಹರಿಯಾಣ): ಸುಮಾರು 130 ಕಿಮೀ.2.ದೆಹಲಿ - ಅಲ್ವಾರ್ (ರಾಜಸ್ಥಾನ): ಬಾಬರ್‌ಪುರ ಮತ್ತು ನೀಮ್ರಾನಾ ಮೂಲಕ ಸಂಪರ್ಕ. ಇಂದಿನ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ