* ಸಾಂಪ್ರದಾಯಿಕ ಕಸುಬು ಮಾಡುವ ಕುಶಲಕರ್ಮಿಗಳಿಗೆ ಉತ್ತೇಜನ ನೀಡಲು ಕೇಂದ್ರ ಸರಕಾರ ಆರಂಭಿಸಿರುವ ಪಿಎಂ ವಿಶ್ವಕರ್ಮ ಯೋಜನೆ ನೋಂದಣಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಇದು 2023 ಸೆಪ್ಟೆಂಬರ್ 17 ರಂದು ಆರಂಭವಾಯಿತು. * ಈ ಯೋಜನೆಗೆ ಎರಡೂವರೆ ಕೋಟಿ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಯಶಸ್ವಿಯಾಗಿ ನೋಂದಣಿ ಪೂರೈಸಿರುವವರ ಸಂಖ್ಯೆ 23,86,369 ಆಗಿದ್ದು, ಕರ್ನಾಟಕದವರ ಸಂಖ್ಯೆ 5,19,346 ಇದೆ. * ಭಾರತ ದೇಶದಲ್ಲಿ ಕರ್ನಾಟಕವೇ ನಂ.1 ಸ್ಥಾನ ಗಳಿಸಿದೆ. 2ನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 2,00,278 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.* ಈ ಯೋಜನೆಯ ಅಡಿಯಲ್ಲಿ, ವಿವಿಧ ರೀತಿಯ ಹಸ್ತಕಲಾ ಮತ್ತು ಸಾಂಪ್ರದಾಯಿಕ ಕೌಶಲ್ಯಗಳನ್ನು ಹೊಂದಿರುವ ಕಾರ್ಮಿಕರು, ಉದ್ಯಮಿಗಳು ಮತ್ತು ಶಿಲ್ಪಿಗಳು ನೋಂದಣಿಯನ್ನು ಮಾಡಿಸಿಕೊಳ್ಳುವ ಮೂಲಕ ಸರ್ಕಾರದಿಂದ ಆರ್ಥಿಕ ನೆರವು, ತರಬೇತಿ, ಯಂತ್ರೋಪಕರಣಗಳು ಮತ್ತು ಬಡ್ಡಿ ರಹಿತ ಸಾಲದಂತಹ ಅನೇಕ ಸೌಲಭ್ಯಗಳನ್ನು ಪಡೆಯಬಹುದು.* ರಾಜ್ಯದ ಹಲವಾರು ಶಿಲ್ಪಿಗಳು, ಕಾರಿಗರು, ಮತ್ತು ಮುಂತಾದ ಅನೇಕ ವೃತ್ತಿಪರರು ಸರ್ಕಾರದ ಆರ್ಥಿಕ ಹಾಗೂ ತಾಂತ್ರಿಕ ಸಹಾಯವನ್ನು ಪಡೆದು ತಮ್ಮ ಉದ್ಯಮಗಳನ್ನು ಬೆಳೆಸಲು ಸಾಧ್ಯವಾಗುತ್ತದೆ.