Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ: ಸಂಸತ್ ವಿಶೇಷ ಅಧಿವೇಶನ
Authored by:
Akshata Halli
Date:
3 ಎಪ್ರಿಲ್ 2026
➤
ಭಾರತೀಯ ಸಂಸದೀಯ ಇತಿಹಾಸದಲ್ಲಿ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ
ಶೇ. 33ರಷ್ಟು ಮೀಸಲಾತಿ
ಕಲ್ಪಿಸುವ 'ನಾರಿ ಶಕ್ತಿ ವಂದನ್ ಕಾಯಿದೆ'ಯನ್ನು ಶೀಘ್ರವಾಗಿ ಜಾರಿಗೊಳಿಸಲು
ಏಪ್ರಿಲ್ 16ರಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ
ವನ್ನು ಕರೆಯಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಕುರಿತು ಮಾಹಿತಿ ನೀಡಿದ್ದು, ಈ ಅಧಿವೇಶನವು ದೇಶದ ರಾಜಕೀಯ ಭೂಪಟವನ್ನೇ ಬದಲಿಸುವ ಸಾಧ್ಯತೆಯಿದೆ.
➤
ಸಂಸತ್ತಿನ ಸ್ಥಾನಗಳ ಸಂಖ್ಯೆ 543ರಿಂದ 816ಕ್ಕೆ ಏರಿಕೆ:
ಈ ವಿಶೇಷ ಅಧಿವೇಶನದ ಪ್ರಮುಖ ಉದ್ದೇಶ 'ಕ್ಷೇತ್ರ ಮರುವಿಂಗಡಣೆ ವಿಧೇಯಕ' (Delimitation Bill) ಮಂಡನೆ. ಈ ವಿಧೇಯಕ ಅಂಗೀಕಾರವಾದರೆ: ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆ ಪ್ರಸ್ತುತ ಇರುವ 543ರಿಂದ 816ಕ್ಕೆ ಏರಿಕೆಯಾಗಲಿದೆ. ಇದರಲ್ಲಿ ಮೂರನೇ ಒಂದರಷ್ಟು, ಅಂದರೆ ಸುಮಾರು 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಇದು 2023ರ 'ನಾರಿ ಶಕ್ತಿ ವಂದನ್ ಕಾಯಿದೆ'ಗೆ ಪೂರಕವಾದ ತಿದ್ದುಪಡಿಗಳನ್ನು ಒಳಗೊಂಡಿರಲಿದೆ.
➤
ದಕ್ಷಿಣ ಭಾರತದ ರಾಜ್ಯಗಳ ಆತಂಕ:
ಕ್ಷೇತ್ರ ಮರುವಿಂಗಡಣೆಯ ವಿಚಾರವು ದಕ್ಷಿಣದ ರಾಜ್ಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದರೆ, ಜನಸಂಖ್ಯೆ ನಿಯಂತ್ರಣ ಮಾಡಿದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬುದು ಪ್ರತಿಪಕ್ಷಗಳ ವಾದ.
➤
ಪ್ರತಿಪಕ್ಷಗಳ ಲೆಕ್ಕಾಚಾರದ ಪ್ರಕಾರ ಸಂಭವನೀಯ ಸ್ಥಾನಗಳ ಬದಲಾವಣೆ:
ರಾಜ್ಯ - ಪ್ರಸ್ತುತ ಸ್ಥಾನಗಳು - ಸಂಭವನೀಯ ಸ್ಥಾನಗಳು (ಮರುವಿಂಗಡಣೆ ನಂತರ)
ಉತ್ತರ ಪ್ರದೇಶ - 80 - 120
ಕರ್ನಾಟಕ - 28 - 41
ತಮಿಳುನಾಡು - 39 - 59
ಕೇರಳ - 20 - 30
➤
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರ ಪ್ರಕಾರ, ಉತ್ತರದ ರಾಜ್ಯಗಳ ಸ್ಥಾನಗಳು ದುಪ್ಪಟ್ಟಾಗುವ ಸಾಧ್ಯತೆಯಿದೆ, ಆದರೆ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವು ರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಲಿದೆ.
Take Quiz
Loading...