* ಸೆಬಿಯ ಅನುಮೋದನೆಯೊಂದಿಗೆ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ)ವು 1983 ರ ಬ್ಯಾಚ್ನ ಒಡಿಶಾ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಇಂಜೆಟಿ ಅವರನ್ನು ತನ್ನ ಆಡಳಿತ ಮಂಡಳಿಯ ಹೊಸ ಅಧ್ಯಕ್ಷರನ್ನಾಗಿ ನೇಮಿಸಿದೆ.* 1983 ರ ಬ್ಯಾಚ್ ಅಧಿಕಾರಿಯಾದ ಇಂಜೆಟಿ ನಿಯಂತ್ರಣ, ಆಡಳಿತ ಮತ್ತು ಹಣಕಾಸು ಸೇವೆಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.* ಇಂಜೆಟಿ ಅವರು 40 ಕ್ಕೂ ಹೆಚ್ಚು ವರ್ಷಗಳ ಅನುಭವವಿದ್ದು, ಮಾಜಿ ಐಎಫ್ಎಸ್ಸಿಎ (IFSC) ಮುಖ್ಯಸ್ಥರಾಗಿದ್ದಾರೆ. ಅವರು ಎನ್ಎಸ್ಇ ಗೆ ಸೇರುವ ಮೊದಲು ಐಎಎಸ್ ಅಧಿಕಾರಿಯಾಗಿದ್ದರು. * 2017 ಮತ್ತು 2020 ರ ನಡುವೆ ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಕೇಂದ್ರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು, ಅಲ್ಲಿ ಅವರು ದಿವಾಳಿತನ, ಸ್ಪರ್ಧೆ ಮತ್ತು ಕಂಪನಿ ಕಾನೂನುಗಳಲ್ಲಿ ಸುಧಾರಣೆಗಳನ್ನು ಮುನ್ನಡೆಸಿದರು.* ಶ್ರೀನಿವಾಸ್ ಕಾರ್ಪೊರೇಟ್ ಮತ್ತು ಹಣಕಾಸು ನಿಯಂತ್ರಣ, ಕೈಗಾರಿಕಾ ಪ್ರಚಾರ, ಕಾರ್ಪೊರೇಟ್ ಮತ್ತು ದಿವಾಳಿತನ ಕಾನೂನು, ಸ್ಪರ್ಧಾ ಕಾನೂನು, ಚಾರ್ಟರ್ಡ್ ಅಕೌಂಟೆನ್ಸಿ, ವೆಚ್ಚ ಅಕೌಂಟೆನ್ಸಿ, ಕಂಪನಿ ಕಾರ್ಯದರ್ಶಿ ಕಾನೂನುಗಳು, ಸಾರ್ವಜನಿಕ ನೀತಿ ಮತ್ತು ಅಂತರರಾಷ್ಟ್ರೀಯ ಸಹಕಾರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ.* 2020 ರಿಂದ 2023 ರವರೆಗೆ ಇಂಜೆಟಿ ಭಾರತದ ಮೊದಲ ಅಂತರರಾಷ್ಟ್ರೀಯ ಹಣಕಾಸು ನಿಯಂತ್ರಕ, ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರದ (ಐಎಫ್ಎಸ್ಸಿಎ) ಸ್ಥಾಪಕ ಅಧ್ಯಕ್ಷರಾಗಿದ್ದರು.* ಶ್ರೀನಿವಾಸ್ ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ಅರ್ಥಶಾಸ್ತ್ರದಲ್ಲಿ ಬಿಎ (ಆನರ್ಸ್) ಮತ್ತು ಯುಕೆಯ ಸ್ಟ್ರಾತ್ಕ್ಲೈಡ್ ಗ್ರಾಜುಯೇಟ್ ಬ್ಯುಸಿನೆಸ್ ಸ್ಕೂಲ್ನಿಂದ ಎಂಬಿಎ ಪದವಿ ಪಡೆದಿದ್ದಾರೆ.