* 2025 ರ ಜನವರಿ 4ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರನ್ನು ಆಯ್ಕೆಮಾಡಲಾಗಿದೆ.
* ವಚನ ಸಾಹಿತ್ಯ ಸಮ್ಮೇಳನ-2025 ಜನವರಿ 4ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
* ಈ ಮಾಹಿತಿಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪಕುಮಾರ್ ಕಲ್ಕೂರ ಮತ್ತು ಅಕ್ಕಮಹಾದೇವಿ ವೀರಶೈವ ಮಹಿಳಾ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ತಿಳಿಸಿದ್ದಾರೆ.
* ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಅರವಿಂದ ಜತ್ತಿ ಮೋಟಾರ್ಸ್ ಸಂಸ್ಥೆಯ ಸ್ಥಾಪಕರು.
* ಬೆಂಗಳೂರಿನ ಹೃದಯ ಭಾಗದಲ್ಲಿ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಅರವಿಂದ ಜತ್ತಿ ಅವರು ಬಸವ ಪ್ರಜ್ಞೆ ಹಾಗೂ ವಚನ ಪ್ರಜ್ಞೆಯ ವಿಕಾಸಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಅಂತರರಾಜ್ಯ ಮಟ್ಟದಲ್ಲಿ ಹಮ್ಮ್ಮಿಕೊಂಡಿದ್ದರು.
ಬುಧವಾರ, 25 ಡಿಸೆಂಬರ್ 2024
7:12 ಅಪರಾಹ್ನ
Daily PDF
ಮಂಗಳೂರು ವಚನ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಅರವಿಂದ ಜತ್ತಿ ಆಯ್ಕೆ
Authored by:
Jyoti Angadi