➤ ಭಾರತ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಯೇ 'ಮಿಷನ್ ಕರ್ಮಯೋಗಿ'. ಈ ಯೋಜನೆಯ ಒಂದು ಭಾಗವಾಗಿ ಅಂಚೆ ಇಲಾಖೆಯ ನೌಕರರಿಗಾಗಿ ವಿಶೇಷವಾಗಿ ರೂಪಿಸಲಾದ ಡಿಜಿಟಲ್ ವೇದಿಕೆಯೇ 'ಡಾಕ್ ಕರ್ಮಯೋಗಿ'.➤ ಮಿಷನ್ ಕರ್ಮಯೋಗಿ: ಮಿಷನ್ ಕರ್ಮಯೋಗಿಯು ಭಾರತೀಯ ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿಗಾಗಿ ರೂಪಿಸಲಾದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ (National Programme for Civil Services Capacity Building - NPCSCB). ಇದು ಸರಕಾರಿ ನೌಕರರಿಗೆ ಕೇವಲ ನಿಯಮ ಆಧಾರಿತ ತರಬೇತಿಯ ಬದಲು 'ಪಾತ್ರ ಆಧಾರಿತ' (Role-based) ಕಲಿಕೆಯನ್ನು ಒದಗಿಸುತ್ತದೆ.- iGOT ಕರ್ಮಯೋಗಿ ಪೋರ್ಟಲ್: ಇದು ಕೇಂದ್ರ ಸರ್ಕಾರದ ಸುಮಾರು 46 ಲಕ್ಷ ನೌಕರರಿಗೆ ಆನ್‌ಲೈನ್ ತರಬೇತಿ ನೀಡುವ ಡಿಜಿಟಲ್ ವೇದಿಕೆಯಾಗಿದೆ.- ಧ್ಯೇಯವಾಕ್ಯ: "Minimum Government, Maximum Governance" (ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ).➤ ಡಾಕ್ ಕರ್ಮಯೋಗಿ (Dak Karmayogi): ಅಂಚೆ ಇಲಾಖೆಯ ಡಿಜಿಟಲ್ ಕ್ರಾಂತಿ: ಮಿಷನ್ ಕರ್ಮಯೋಗಿಯ ಆಶಯದಂತೆ ಅಂಚೆ ಇಲಾಖೆಯು ತನ್ನ ಸಿಬ್ಬಂದಿ ಮತ್ತು ಗ್ರಾಮೀಣ ಡಾಕ್ ಸೇವಕರ (GDS) ಕೌಶಲ್ಯವನ್ನು ಹೆಚ್ಚಿಸಲು 'ಡಾಕ್ ಕರ್ಮಯೋಗಿ' ಎಂಬ ಆನ್‌ಲೈನ್ ಪೋರ್ಟಲ್ ಅನ್ನು ಆರಂಭಿಸಿದೆ. ➤ ದೇಶಾದ್ಯಂತ ಇರುವ ಅಂಚೆ ನೌಕರರಿಗೆ ಏಕರೂಪದ ತರಬೇತಿ ನೀಡುವ ಮೂಲಕ ಅವರ ಡಿಜಿಟಲ್ ಕೌಶಲವನ್ನು ಹೆಚ್ಚಿಸಿ, ಸಾರ್ವಜನಿಕರಿಗೆ ವಿಳಂಬಮುಕ್ತ ಹಾಗೂ ಗುಣಮಟ್ಟದ ಗ್ರಾಹಕ ಸ್ನೇಹಿ ಸೇವೆಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.➤ ಡಾಕ್ ಕರ್ಮಯೋಗಿಯ ಪ್ರಮುಖ ವೈಶಿಷ್ಟ್ಯಗಳು:- ಡಿಜಿಟಲ್ ಕಲಿಕೆ: ಈ ಪೋರ್ಟಲ್ ಮೂಲಕ ನೌಕರರು ಆನ್‌ಲೈನ್‌ನಲ್ಲಿ ತರಬೇತಿ ಪಡೆಯಬಹುದು.- ವಿಷಯ ವ್ಯಾಪ್ತಿ: ಹಣಕಾಸು ಸೇವೆಗಳು, ಅಂಚೆ ಕಾರ್ಯಾಚರಣೆ, ವಿಮಾ ಯೋಜನೆಗಳು, ಡಿಬಿಟಿ (Direct Benefit Transfer) ಪಾವತಿಗಳು ಮತ್ತು ಆಧಾರ್ ಸಂಬಂಧಿತ ಸೇವೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ.- ಸ್ವಯಂ ಕಲಿಕೆ (Self-paced Learning): ನೌಕರರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಲಿಯುವ ಅವಕಾಶವಿದೆ.- ಮೌಲ್ಯಮಾಪನ ಮತ್ತು ಪ್ರಮಾಣಪತ್ರ: ಪ್ರತಿ ತರಬೇತಿಯ ನಂತರ ಆನ್‌ಲೈನ್ ಪರೀಕ್ಷೆ ನಡೆಯಲಿದ್ದು, ಯಶಸ್ವಿಯಾದವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಇದು ನೌಕರರ ಕಾರ್ಯಕ್ಷಮತೆಯನ್ನು ಅಳೆಯಲು ಸಹಕಾರಿಯಾಗಿದೆ.➤ ಈ ಯೋಜನೆಯ ಪ್ರಯೋಜನಗಳು:- ತಳಮಟ್ಟದ ಸಬಲೀಕರಣ: ವಿಶೇಷವಾಗಿ ಗ್ರಾಮೀಣ ಭಾಗದ 'ಗ್ರಾಮೀಣ ಡಾಕ್ ಸೇವಕರಿಗೆ' ಡಿಜಿಟಲ್ ಜ್ಞಾನ ಒದಗಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.- ಸರ್ಕಾರಿ ಸೇವೆಗಳ ತಲುಪುವಿಕೆ: ಸರ್ಕಾರದಿಂದ ನಾಗರಿಕರಿಗೆ (G2C) ತಲುಪಬೇಕಾದ ಉಳಿತಾಯ ಯೋಜನೆಗಳು ಮತ್ತು ವಿಮಾ ಸೌಲಭ್ಯಗಳು ಜನರಿಗೆ ಹೆಚ್ಚು ಪರಿಣಾಮಕಾರಿಯಾಗಿ ತಲುಪುತ್ತವೆ.- ನಾಗರಿಕ ಕೇಂದ್ರಿತ ಆಡಳಿತ: ಸೇವಾ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಮೂಲಕ ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುತ್ತದೆ.- ಆಧುನೀಕರಣ: ಭಾರತದ ಅಂಚೆ ವ್ಯವಸ್ಥೆಯನ್ನು ಜಾಗತಿಕ ಮಟ್ಟದ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಆಧುನೀಕರಿಸಲು ಇದು ಪೂರಕವಾಗಿದೆ.