* ಈ ಅಸಾಧಾರಣ ಧೈರ್ಯ ಮತ್ತು ಶೂರತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶೌರ್ಯ ಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.* ಮೇಜರ್ ಆಶಿಶ್ ದಹಿಯಾ ಅವರು ರಾಷ್ಟ್ರೀಯ ರೈಫಲ್ಸ್ನ 50ನೇ ಬೆಟಾಲಿಯನ್ನ ಹಿರಿಯ ಅಧಿಕಾರಿ. ಜೂನ್ 2022ರಿಂದ ಜೂನ್ 2024ರ ತನಕ, ಅವರು ಐದು ಹೈ-ರಿಸ್ಕ್ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ನಾಲ್ವರು ಉಗ್ರಗಾಮಿಗಳನ್ನು ತಟಸ್ಥಗೊಳಿಸುವ ಮತ್ತು ಮೂರು ಸುಧಾರಿತ ಸ್ಫೋಟಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ.* 2024ರ ಜೂನ್ 2ರಂದು ಪುಲ್ವಾಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ, ಭಯೋತ್ಪಾದಕರು ಭೀಕರವಾಗಿ ಗ್ರೆನೇಡ್ಗಳು ಹಾಗೂ ಗುಂಡು ಹಾರಿಸಿದ ಸಂದರ್ಭದಲ್ಲೂ, ಮೇಜರ್ ದಹಿಯಾ ಧೈರ್ಯದಿಂದ ಮುಂದಾಗಿದ್ದರು.* ಗ್ರೆನೇಡ್ ಸ್ಫೋಟದಿಂದ ಗಾಯಗೊಂಡ ತಮ್ಮ ಸಹೋದ್ಯೋಗಿಯನ್ನು ಕಾಪಾಡಲು ಅವರು ತಮ್ಮ ಜೀವದ ಹಂಗನ್ನು ತೊರೆದು, ಸುರಕ್ಷಿತ ಸ್ಥಳಕ್ಕೆ ಎಳೆದೊಯ್ದು ರಕ್ಷಿಸಿದರು.* ಕಾರ್ಯಾಚರಣೆ ವೇಳೆ, ಅವರು ಅಡಗಿಸಿಕೊಂಡಿದ್ದ ಭಯೋತ್ಪಾದಕನನ್ನು ಹತ್ತಿರದಿಂದ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿ ತಟಸ್ಥಗೊಳಿಸಿದರು. ಇದೇ ವೇಳೆ ಮತ್ತೆ ತಮ್ಮ ಗೆಳೆಯನನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತಮ್ಮನ್ನು ಮತ್ತೆ ಅಪಾಯದೊಳಕ್ಕೆ ತಳ್ಳಿದರು. ಈ ಸಾಹಸದಿಂದಾಗಿ ಅವರ ಗೆಳೆಯನ ಪ್ರಾಣ ಉಳಿಯಿತು.* ಶೌರ್ಯ ಪ್ರಶಸ್ತಿಗಳನ್ನು ಪಡೆದ ಒಟ್ಟು 33 ಮಂದಿ ಪೈಕಿ ಮೇಜರ್ ಆಶಿಶ್ ಒಬ್ಬರು. ಈ ಪಟ್ಟಿಯಲ್ಲಿ ಏಳು ಮರಣೋತ್ತರ ಪ್ರಶಸ್ತಿಗಳೂ ಸೇರಿವೆ.* ಸಶಸ್ತ್ರ ಪಡೆಗಳು, ಸಿಎಪಿಎಫ್ಗಳು ಮತ್ತು ಪೊಲೀಸ್ ಪಡೆಗಳಿಂದ ಆಯ್ಕೆಯಾದ ಹೆಮ್ಮೆಯ ಸಾಧಕರಿಗೆ ರಾಷ್ಟ್ರಪತಿ ಈ ಗೌರವವನ್ನು ನೀಡಿದರು.