Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಲಕ್ಷ್ಮಣ ಝೂಲಾಗೆ ಪರ್ಯಾಯ: ರಿಷಿಕೇಶದಲ್ಲಿ ‘ಬಜರಂಗ ಸೇತು’ ಪ್ರಾರಂಭ
31 ಅಕ್ಟೋಬರ್ 2025
* ಉತ್ತರಾಖಂಡದ ಪ್ರಸಿದ್ಧ ಯಾತ್ರಾಧಾಮವಾದ ರಿಷಿಕೇಶದಲ್ಲಿ
ಬಜರಂಗ ಸೇತು
ಎಂಬ ಹೊಸ ಗಾಜಿನ ನೆಲದ (Glass–Floor) ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಪ್ರವಾಸಿಗರು ಹಾಗೂ ಯಾತ್ರಿಕರಿಗೆ ಹೊಸ ಆಕರ್ಷಣೆಯಾಗಿ ಪರಿಣಮಿಸಿದೆ.
* ವರ್ಷಗಳ ಕಾಲ ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಿದ್ದ
ಲಕ್ಷ್ಮಣ ಝೂಲಾ
ಸೇತುವೆ ಪ್ರಾಯೋಜ್ಯ, ಜಂಗು ಹಾಗೂ ಸುರಕ್ಷತಾ ಕಾರಣಗಳಿಂದ ಹಾನಿಗೊಳಗಾಗಿತ್ತು. ಸಂಚಾರಕ್ಕೆ ಅನನೂಕುಲ ಹಾಗೂ ಅಪಾಯದ ಸಾಧ್ಯತೆ ಹೆಚ್ಚಾಗಿದ್ದ ಕಾರಣ ಹೊಸ ಪರ್ಯಾಯವಾಗಿ
ಬಜರಂಗ ಸೇತು
ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿತು.
*ಬಜರಂಗ ಸೇತು ಇದು ಪಾದಚಾರಿಗಳಿಗಾಗಿ ಮಾತ್ರ (Pedestrian Bridge) ನಿರ್ಮಿಸಲಾದ ಸೇತುವೆ ಆಗಿದೆ.
* ಗಂಗಾನದಿಯ ಮೇಲಿಂದ ನಡೆಯುವ ಅನುಭವವನ್ನು ಗಾಜಿನ ನೆಲದ ಮೂಲಕ ಸ್ಪಷ್ಟವಾಗಿ ನೋಡಬಹುದಾಗಿದೆ, ಇದು ವಿಶೇಷ ಆಕರ್ಷಣೆ.
* ಮಲ್ಟಿ-ಲೇಯರ್ ಟೆಂಪರ್ಡ್ ಗ್ಲಾಸ್ ಬಳಸಿ ನೆಲವನ್ನು ನಿರ್ಮಿಸಿರುವುದು ಪ್ರಮುಖ ತಾಂತ್ರಿಕ ವೈಶಿಷ್ಟ್ಯ ಇದು ಮೂರು ಪದರಗಳ ಗಟ್ಟಿ ಗಾಜು ಹೊಂದಿರುವುದರಿಂದ ಹೆಚ್ಚು ತೂಕ ಸಹಿಸುವ ಸಾಮರ್ಥ್ಯ ಹೊಂದಿದೆ.
* ಜೊತೆಗೆ ಪಾದಚಾರಿ ಸುರಕ್ಷತೆ,ಬಿರುಕು ತಡೆಗಟ್ಟುವ ಗುಣ ಸೇತುವೆಯ ಶಕ್ತಿ ಪರೀಕ್ಷೆಗಳನ್ನು ವಿಜ್ಞಾನಿಕವಾಗಿ ನಡೆಸಲಾಗಿದ್ದು, ನಿರಂತರ ನಿಗಾವಯವಸ್ಥೆ ಕೂಡ ಅಳವಡಿಸಲಾಗಿದೆ.
* ಸೇತುವೆಯ ಉದ್ದ ಸುಮಾರು 125 ಮೀಟರ್,ಎತ್ತರ 57 ಮೀಟರ್ ಗಂಗಾ ನದಿಯಿಂದ ಹಾಗೂ ಗಾಜಿನ ದಪ್ಪ40 ಮಿಮೀ (ಮೂರು ಪದರಗಳು) ಆಗಿದೆ.ಮತ್ತು ಸೇತುವೆಯ ಮೇಲೆ ಒಂದೇ ಸಮಯದಲ್ಲಿ 700 ಜನರು ಓಡಾಡುವ ಸಾಮರ್ಥ್ಯ ವನ್ನು ಹೊಂದಿದೆ.
* ಸೇತುವೆಯು ಸ್ಥಳೀಯ ವ್ಯಾಪಾರಿಗಳಿಗೆ ಹೋಟೆಲ್,ರೆಸ್ಟೋರೆಂಟ್,ಕೈಗಾರಿಕಾ ಕೈಪಾಡಿ ವಸ್ತುಗಳ ಮಾರಾಟ ಪ್ರವಾಸೋದ್ಯಮದ ಆದಾಯ ಗಣನೀಯವಾಗಿ ಏರಿಕೆ ಸ್ಥಳೀಯ ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡುವಮೂಲಕ ಆರ್ಥಿಕ ವೃದ್ಧಿಗೆ ಕಾರಣವಾಗಲಿದೆ.
* ಬಜರಂಗ ಸೇತು ಆಧುನಿಕ ತಂತ್ರಜ್ಞಾನ, ಪ್ರವಾಸೋದ್ಯಮದ ಉತ್ತೇಜನ ಮತ್ತು ಧಾರ್ಮಿಕ–ಸಾಹಸ ಅನುಭವಕ್ಕೆ
ಹೊಸ ವೇದಿಕೆ
ಆಗಿದೆ.
Take Quiz
Loading...