Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೆಎಸ್ಆರ್ಟಿಸಿಯ ‘ಧ್ವನಿ ಸ್ಪಂದನ’ಕ್ಕೆ ರಾಷ್ಟ್ರ ಮಟ್ಟದ ಗೌರವ: ದೃಷ್ಟಿಹೀನರ ಪಾಲಿಗೆ ಬೆಳಕಾದ ಕರ್ನಾಟಕದ ಸಾರಿಗೆ ಸಂಸ್ಥೆ!
Authored by:
Akshata Halli
Date:
13 ಮಾರ್ಚ್ 2026
➤
ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತನ್ನ ನವೀನ ತಂತ್ರಜ್ಞಾನದ ಮೂಲಕ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ದೃಷ್ಟಿಹೀನ ಪ್ರಯಾಣಿಕರಿಗೆ ಬಸ್ ಗುರುತಿಸಲು ನೆರವಾಗುವ
‘ಧ್ವನಿ ಸ್ಪಂದನ’ (Dhwani Spandana)
ಎಂಬ ವಿನೂತನ ಉಪಕ್ರಮಕ್ಕಾಗಿ ಕೆಎಸ್ಆರ್ಟಿಸಿಗೆ ಪ್ರತಿಷ್ಠಿತ
‘ಗವರ್ನೆನ್ಸ್ ನೌ 12ನೇ ಪಿಎಸ್ಯು (PSU) ರಾಷ್ಟ್ರೀಯ ಪ್ರಶಸ್ತಿ’
ಒಲಿದುಬಂದಿದೆ. ಸಂಸ್ಥೆಯು ಈ ಪ್ರಶಸ್ತಿಯನ್ನು
"ಉತ್ಕೃಷ್ಟ ಆವಿಷ್ಕಾರ" (Excellence in Innovation)
ವಿಭಾಗದಲ್ಲಿ ಮುಡಿಗೇರಿಸಿಕೊಂಡಿದ್ದು, ಸಾರ್ವಜನಿಕ ಸಾರಿಗೆಯನ್ನು ಎಲ್ಲರಿಗೂ ಸುಲಭವಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
➤
‘ಧ್ವನಿ ಸ್ಪಂದನ’ ಯೋಜನೆ:
ಧ್ವನಿ ಸ್ಪಂದನವು ದೃಷ್ಟಿಹೀನ ಪ್ರಯಾಣಿಕರಿಗಾಗಿ ಅಭಿವೃದ್ಧಿಪಡಿಸಲಾದ ಒಂದು ವಿಶೇಷ ಆಡಿಯೋ-ಆಧಾರಿತ ಬಸ್ ಗುರುತಿಸುವಿಕೆ ಮತ್ತು ಸಂಚರಣೆ ವ್ಯವಸ್ಥೆಯಾಗಿದೆ (Onboard Bus Identification and Navigation System). ಸಾಮಾನ್ಯವಾಗಿ ದೃಷ್ಟಿಹೀನರು ಬಸ್ ನಿಲ್ದಾಣಕ್ಕೆ ಬಂದಾಗ ತಮಗೆ ಬೇಕಾದ ಬಸ್ ಯಾವುದೆಂದು ತಿಳಿಯಲು ಇತರರ ಸಹಾಯ ಪಡೆಯಬೇಕಾಗುತ್ತದೆ. ಆದರೆ ಈ ವ್ಯವಸ್ಥೆಯು ಅವರು ಸ್ವತಂತ್ರವಾಗಿ ಪ್ರಯಾಣಿಸಲು ನೆರವಾಗುತ್ತದೆ.
➤
ಈ ಯೋಜನೆಯ ಮುಖ್ಯಾಂಶಗಳು:
ಆಡಿಯೋ ಮೂಲಕ ಬಸ್ ಗುರುತಿಸುವಿಕೆ:
ಬಸ್ ನಿಲ್ದಾಣಕ್ಕೆ ಬರುವ ಬಸ್ಗಳ ಮಾಹಿತಿ ಮತ್ತು ರೂಟ್ ಸಂಖ್ಯೆಯನ್ನು ಈ ವ್ಯವಸ್ಥೆಯು ಧ್ವನಿ ಸಂದೇಶದ ಮೂಲಕ ತಿಳಿಸುತ್ತದೆ.
ಸ್ವತಂತ್ರ ಪ್ರಯಾಣ:
ಇದರಿಂದ ದೃಷ್ಟಿಹೀನರು ಯಾರ ಸಹಾಯವಿಲ್ಲದೆ ತಮಗೆ ಬೇಕಾದ ಬಸ್ಸನ್ನು ಸುಲಭವಾಗಿ ಗುರುತಿಸಿ ಹತ್ತಬಹುದು.
ಸುರಕ್ಷಿತ ಸಂಚಾರ:
ಪ್ರಯಾಣದ ಸಮಯದಲ್ಲಿ ನಿಲ್ದಾಣಗಳ ಮಾಹಿತಿಯನ್ನು ನೀಡುವ ಮೂಲಕ ಸುರಕ್ಷಿತವಾಗಿ ಇಳಿಯಲು ಇದು ಸಹಕಾರಿ.
➤
ಮೈಸೂರಿನಲ್ಲಿ ಪ್ರಾಯೋಗಿಕ ಜಾರಿ:
ಈ ಯೋಜನೆಯನ್ನು ಈಗಾಗಲೇ ಮೈಸೂರು ನಗರ ಸಾರಿಗೆಯ
200 ಬಸ್ಗಳಲ್ಲಿ
ಅಳವಡಿಸಲಾಗಿದೆ. ವಿಶೇಷವೆಂದರೆ, ಈ ಯೋಜನೆಗೆ ಜರ್ಮನಿಯ
GIZ (GIZ Germany)
ಸಂಸ್ಥೆಯು ತಾಂತ್ರಿಕ ಸಹಕಾರ ನೀಡಿದೆ.
➤
ಈ ಪ್ರಶಸ್ತಿಯ ಮುಖ್ಯ:
ಅರ್ಗಾನಿಕ್ ಮೊಬಿಲಿಟಿ:
ತಂತ್ರಜ್ಞಾನವನ್ನು ಬಳಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾರಿಗೆ ವ್ಯವಸ್ಥೆ ತಲುಪುವಂತೆ ಮಾಡುವುದು ಇದರ ಗುರಿ.
ರಾಷ್ಟ್ರೀಯ ಮಾನ್ಯತೆ:
ಪಿಎಸ್ಯು (PSU) ವಲಯದಲ್ಲಿ ಕೆಎಸ್ಆರ್ಟಿಸಿಯ ನವೀನ ಆಲೋಚನೆಗಳಿಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ.
ಸ್ಮಾರ್ಟ್ ಸಿಟಿ ಕನಸು:
ಭಾರತದ ಸ್ಮಾರ್ಟ್ ಮೊಬಿಲಿಟಿ ಮತ್ತು ಒಳಗೊಳ್ಳುವ ಮೂಲಸೌಕರ್ಯ ಅಭಿವೃದ್ಧಿಗೆ ಇದು ಪೂರಕವಾಗಿದೆ.
Take Quiz
Loading...