* ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಶಿಲ್ಪಿಗಳನ್ನು 2022ನೇ ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿಗೆ ಹಾಗೂ 2023ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿಗೆ ಸರ್ವಾನುಮತದಿಂದ ಹತ್ತು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ. * ಈ ಪ್ರಶಸ್ತಿ ಪುರಸ್ಕತರಿಗೆ ತಲಾ ರೂ.50,000/-ಗಳ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. * ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2022ನೇ 2023ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2023ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2024ರ ಬಹುಮಾನ ವಿತರಣಾ ಸಮಾರಂಭ ಹಾಗೂ ಶಿಲ್ಪಕಲಾ ಪ್ರದರ್ಶನವನ್ನು ಡಿಸೆಂಬರ್-2024ರ ಮಾಹೆಯಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ.* ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ನೇತೃತ್ವದ ಕಾರ್ಯಕಾರಿ ಸಮಿತಿ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಿದೆ. ಅಕಾಡೆಮಿ ರಿಜಿಸ್ಟ್ರಾರ್ ಆರ್. ಚಂದ್ರಶೇಖರ್ ಅವರು ಪ್ರಶಸ್ತಿ ಪಟ್ಟಿಯನ್ನು ನವೆಂಬರ್ 28 ರಂದು (ಗುರುವಾರ) ಬಿಡುಗಡೆ ಮಾಡಿದ್ದಾರೆ.* 2022ನೇ ಸಾಲಿನ ಗೌರವ ಪ್ರಶಸ್ತಿಗೆ ಗದಗದ ವೀರಭದ್ರಪ್ಪ ಕಾಳಪ್ಪ ಕವಲೂರು (ಸಂಪ್ರದಾಯ ಶಿಲ್ಪ), ಚಿಕ್ಕಮಗಳೂರಿನ ಎಸ್.ಪಿ. ಫಣಿಯಾಚಾರ್ (ಸಂಪ್ರದಾಯ ಶಿಲ್ಪ), ಯಾದಗಿರಿಯ ಬನಪ್ಪ ಬಡಿಗೇರ (ಜಾನಪದ ಶಿಲ್ಪ), ಬೆಂಗಳೂರಿನ ಗೋಪಿನಾಥ್ ಎಸ್. (ಸಮಕಾಲೀನ ಶಿಲ್ಪ) ಹಾಗೂ ಶಿವಮೊಗ್ಗದ ಸಿ.ವಿ. ರಾಮಕೃಷ್ಣ (ಸಿಮೆಂಟ್ ಶಿಲ್ಪ) ಆಯ್ಕೆಯಾಗಿದ್ದಾರೆ.* 2023ನೇ ಸಾಲಿನ ಗೌರವ ಪ್ರಶಸ್ತಿಗೆ ಬಾಗಲಕೋಟೆಯ ಅಲ್ಲಿಸಾಬ್ ಸೈ ನದಾಫ್ (ಸಂಪ್ರದಾಯ ಶಿಲ್ಪ), ಹಾವೇರಿಯ ಮಾನಪ್ಪ ಷಣ್ಮುಖಪ್ಪ ಬಡಿಗೇರ (ಸಂಪ್ರದಾಯ ಶಿಲ್ಪ), ಕಲಬುರಗಿಯ ವೀರಣ್ಣ ಶಿಲ್ಪಿ (ಸಂಪ್ರದಾಯ ಶಿಲ್ಪ), ಬೆಂಗಳೂರಿನ ಶಾಂತಮಣಿ ಎಂ. (ಸಮಕಾಲೀನ ಶಿಲ್ಪ) ಹಾಗೂ ದಾವಣಗೆರೆಯ ಟಿ. ಶ್ರೀನಿವಾಸ್ (ಸಿಮೆಂಟ್ ಶಿಲ್ಪ) ಭಾಜನರಾಗಿದ್ದಾರೆ. * 2023ನೇ ಸಾಲಿನ 'ಶಿಲ್ಪಶ್ರೀ ಪ್ರಶಸ್ತಿ'ಗೆ 10 ಶಿಲ್ಪಿಗಳು ಆಯ್ಕೆಯಾಗಿದ್ದಾರೆ. ವಿಜಯಪುರದ ಬಸವರಾಜ್ ಕೆ. ಮಾಯಾಚಾರಿ. ಶಿವಮೊಗ್ಗದ ಶ್ರೀಧರಮೂರ್ತಿ ಕೆ., ಕಲಬುರಗಿಯ ಮಹೇಶ್ ಕುಮಾರ್ ಡಿ. ತಳವಾರ್, ಮಂಡ್ಯದ ಎಚ್.ಕೆ. ಅಣ್ಣಯ್ಯಚಾರ್. ಧಾರವಾಡದ ಸುರೇಶ್ ಎಸ್.ಕಮ್ಮಾರ, ಬೆಂಗಳೂರಿನ ಆರ್. ವೇಣುಗೋಪಾಲ್, ಚಿತ್ರದುರ್ಗದ ಬಾಬುಚರಣ್ ಎನ್.ಕೆ., ಬೆಂಗಳೂರು ಗ್ರಾಮಾಂತರದ ರಘು ಎಂ. ಹಾವೇರಿಯ ಮರಿಯಪ್ಪ ಡಿ. ಹೊನ್ನಮ್ಮನವರ್ ಹಾಗೂ ಮೈಸೂರಿನ ವಿಚಾರ್ ಬಿ.ಎನ್. ಪ್ರಶಸ್ತಿಗೆ ಭಾಜನರಾಗಿದ್ದಾರೆ. * ಈ ಶಿಲ್ಪಶ್ರೀ ಪ್ರಶಸ್ತಿಯು ತಲಾ ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.