* ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. * ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಜಾಗೃತಿ ಅಭಿಯಾನಗಳಲ್ಲಿ ಅವರು ಪ್ರಮುಖ ಪಾತ್ರವಹಿಸಲಿದ್ದಾರೆ.* ಅನಿಲ್ ಕುಂಬ್ಳೆಗೆ ವನ್ಯಜೀವಿಗಳ ಮತ್ತು ಅರಣ್ಯದ ಬಗ್ಗೆ ಅಪಾರ ಕಾಳಜಿ ಇರುವುದರಿಂದ ಅವರು ಯಾವುದೇ ಸಂಭಾವನೆ ಪಡೆಯದೆ ಈ ಹೊಣೆ ಒಪ್ಪಿದ್ದಾರೆ. ಮುಂಚೆ ಅವರು ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿದ್ದ ಅನುಭವವಿದೆ.* ಇತ್ತೀಚಿನ 2 ವರ್ಷಗಳಲ್ಲಿ 8848 ವನಮಹೋತ್ಸವ ನಡೆದಿದ್ದು, 8.5 ಕೋಟಿ ಸಸಿಗಳನ್ನು ನೆಡಲಾಗಿದೆ. 120975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ವೃಕ್ಷೋದ್ಯಾನ, 35 ದೇವರ ಕಾಡು ನಿರ್ಮಾಣವಾಗಿದೆ. ಕೃಷಿಕರಿಗೆ 3.70 ಕೋಟಿ ಸಸಿಗಳು ವಿತರಿಸಲಾಗಿದೆ.* ಬೃಹತ್ ಉದ್ಯಾನ ನಿರ್ಮಾಣಕ್ಕಾಗಿ ಯಲಹಂಕದ ಮಾದಪ್ಪನಹಳ್ಳಿಯ 153 ಎಕರೆ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದು, ಎರಡು ತಿಂಗಳಲ್ಲಿ ಶಂಕುಸ್ಥಾಪನೆ ನಡೆಯಲಿದೆ. ಈ ಯೋಜನೆಯು ಬೆಂಗಳೂರಿನಲ್ಲಿ ಹೊಸ "ಹಸಿರು ಶ್ವಾಸತಾಣ" ರೂಪಿಸಲಿದೆ.