* ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೇವೆಗಳನ್ನು ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” ಅಕ್ಟೋಬರ್ 1ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. * ಈ ಯೋಜನೆ ರಾಜ್ಯ ಸರ್ಕಾರಿ ನೌಕರರ ಹಲವು ದಶಕಗಳ ಕನಸಿಗೆ ಸಾಕಾರ ರೂಪ ನೀಡುತ್ತಿದೆ.ಯೋಜನೆಯ ಮಹತ್ವ* ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚು ಮಾಡುವ ಸಮಸ್ಯೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. * ರಾಜ್ಯಾದ್ಯಂತ ಇರುವ ಸರ್ಕಾರ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಟ್ರೀಟ್ಮೆಂಟ್ ಲಭ್ಯವಾಗಲಿದೆ.ಮಾಸಿಕ ವಂತಿಕೆ ಕಡಿತದ ವಿವರಗಳು* ಈ ಯೋಜನೆಗೆ ಸೇರುವ ಎಲ್ಲಾ ಸರ್ಕಾರಿ ನೌಕರರ ವೇತನದಿಂದ ಪ್ರತಿಮಾಸವೂ ನಿಗದಿತ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಅದು ಹೀಗೆ:>ಗ್ರೂಪ್ A ನೌಕರರು – ₹1000>ಗ್ರೂಪ್ B ನೌಕರರು – ₹500>ಗ್ರೂಪ್ C ನೌಕರರು – ₹350>ಗ್ರೂಪ್ D ನೌಕರರು – ₹250ಈ ಮೊತ್ತವನ್ನು ಸರ್ಕಾರದ ವಿಶೇಷ ಆರೋಗ್ಯ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ, ಇದರಿಂದ ವೈದ್ಯಕೀಯ ವೆಚ್ಚಗಳನ್ನು ಭರಿಸಲು ನೆರವಾಗಲಿದೆ.ನೌಕರರ ಆಯ್ಕೆಯ ಸ್ವಾತಂತ್ರ್ಯ# ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದ ನೌಕರರು ಅಕ್ಟೋಬರ್ 18ರೊಳಗೆ ತಮ್ಮ ಜಿಲ್ಲೆಯ ಜಿಲ್ಲಾ ಅಭಿವೃದ್ಧಿ ಕಾರ್ಯನಿರ್ವಹಣಾಧಿಕಾರಿಗಳಿಗೆ (DDPO) ಲಿಖಿತ ಮಾಹಿತಿ ನೀಡಬೇಕಾಗಿದೆ.# ಯಾರೇ ಲಿಖಿತವಾಗಿ ಮಾಹಿತಿ ನೀಡದಿದ್ದರೂ, ಅವರನ್ನು ಸ್ವಯಂಪ್ರೇರಿತವಾಗಿ ಯೋಜನೆಯಲ್ಲಿ ಸೇರಿಸಿದಂತೆ ಪರಿಗಣಿಸಲಾಗುತ್ತದೆ.