Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ: ಇಂದಿನಿಂದ ಸರ್ಕಾರಿ ನೌಕರರಿಗೆ ನಗದುರಹಿತ ಚಿಕಿತ್ಸೆಯ ಸೌಲಭ್ಯ
1 ಅಕ್ಟೋಬರ್ 2025
* ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೇವೆಗಳನ್ನು ನೀಡುವ
“ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ”
ಅಕ್ಟೋಬರ್ 1ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.
* ಈ ಯೋಜನೆ ರಾಜ್ಯ ಸರ್ಕಾರಿ ನೌಕರರ ಹಲವು ದಶಕಗಳ ಕನಸಿಗೆ ಸಾಕಾರ ರೂಪ ನೀಡುತ್ತಿದೆ.
ಯೋಜನೆಯ ಮಹತ್ವ
* ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚು ಮಾಡುವ ಸಮಸ್ಯೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
* ರಾಜ್ಯಾದ್ಯಂತ ಇರುವ ಸರ್ಕಾರ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ
ಕ್ಯಾಶ್ಲೆಸ್ ಟ್ರೀಟ್ಮೆಂಟ್
ಲಭ್ಯವಾಗಲಿದೆ.
ಮಾಸಿಕ ವಂತಿಕೆ ಕಡಿತದ ವಿವರಗಳು
* ಈ ಯೋಜನೆಗೆ ಸೇರುವ ಎಲ್ಲಾ ಸರ್ಕಾರಿ ನೌಕರರ ವೇತನದಿಂದ ಪ್ರತಿಮಾಸವೂ ನಿಗದಿತ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಅದು ಹೀಗೆ:
>
ಗ್ರೂಪ್ A ನೌಕರರು
– ₹1000
>
ಗ್ರೂಪ್ B ನೌಕರರು
– ₹500
>
ಗ್ರೂಪ್ C ನೌಕರರು
– ₹350
>
ಗ್ರೂಪ್ D ನೌಕರರು
– ₹250
ಈ ಮೊತ್ತವನ್ನು ಸರ್ಕಾರದ ವಿಶೇಷ ಆರೋಗ್ಯ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ, ಇದರಿಂದ ವೈದ್ಯಕೀಯ ವೆಚ್ಚಗಳನ್ನು ಭರಿಸಲು ನೆರವಾಗಲಿದೆ.
ನೌಕರರ ಆಯ್ಕೆಯ ಸ್ವಾತಂತ್ರ್ಯ
# ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದ ನೌಕರರು
ಅಕ್ಟೋಬರ್ 18ರೊಳಗೆ
ತಮ್ಮ
ಜಿಲ್ಲೆಯ ಜಿಲ್ಲಾ ಅಭಿವೃದ್ಧಿ ಕಾರ್ಯನಿರ್ವಹಣಾಧಿಕಾರಿಗಳಿಗೆ (DDPO)
ಲಿಖಿತ ಮಾಹಿತಿ ನೀಡಬೇಕಾಗಿದೆ.
# ಯಾರೇ ಲಿಖಿತವಾಗಿ ಮಾಹಿತಿ ನೀಡದಿದ್ದರೂ, ಅವರನ್ನು ಸ್ವಯಂಪ್ರೇರಿತವಾಗಿ ಯೋಜನೆಯಲ್ಲಿ ಸೇರಿಸಿದಂತೆ ಪರಿಗಣಿಸಲಾಗುತ್ತದೆ.
Take Quiz
Loading...