* ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡುವ ಮಹತ್ವದ ನಿರ್ಧಾರ ಕೈಗೊಂಡಿರುವ ಈಗ ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ಶಿಕ್ಷಣ ನೀತಿ(KEP)ಗೆ ಪೂರಕವಾಗಿ ಜ್ಞಾನ ಆಯೋಗವನ್ನು ಪುನಾರಚನೆ ಮಾಡಲಿದೆ.* ರಾಜ್ಯ ಶಿಕ್ಷಣ ನೀತಿ (KEP) ರೂಪಿಸುವುದಕ್ಕಾಗಿ ವಿಹ್ವ ವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷರಾದ, ಶಿಕ್ಷಣ ತಜ್ಞರಾದ ಪ್ರೊ. ಸುಖದೇವ್ ಥೋರಟ್ ಅದ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. * ಈ ನೀತಿಯು ತಜ್ಞರ ನೇತೃತ್ವದ ತಂಡ ಶಾಲಾ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣದ ಗುಣಮಟ್ಟವನ್ನು ಜಾಗತಿಕ ಮಟ್ಟದ ಶಿಕ್ಷಣಕ್ಕೆ ರಾಜ್ಯದ ವಿದ್ಯಾರ್ಥಿಗಳನ್ನು ಸಮರ್ಥಗೊಳಿಸುವ ನಿಟ್ಟಿನಲ್ಲಿ KEP ಇರಲಿದೆ.* ಯುಜಿಸಿಯ ಮಾಜಿ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಪ್ರೊ. ಸುಖದೇವ್ ಥೋರಟ್ ರವರ ಅಧ್ಯಕ್ಷತೆಯಲ್ಲಿ 15 ಸದಸ್ಯರು ಹಾಗೂ 8 ವಿಷಯ ತಜ್ಞರನ್ನೊಳಗೊಂಡ ಆಯೋಗ ರಚಿಸಲಾಗಿದೆ.