* ನೆಗೋಷಿಯೇಬಲ್‌ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ ಅಡಿಯಲ್ಲಿ ಪ್ರಕರಣಗಳನ್ನು ನಿರ್ವಹಿಸಲು ದೇಶದ ಮೊದಲ ವಿಶೇಷ ಡಿಜಿಟಲ್‌ ನ್ಯಾಯಾಲಯ ಕೇರಳದಲ್ಲಿ ಕಾರ್ಯರಂಭ ಮಾಡಿದೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ದೇಶದ ಮೊದಲ ಡಿಜಿಟಲ್‌ ನ್ಯಾಯಲಯವನ್ನು ಉದ್ಘಾಟಿಸಿದರು.* ಇಲ್ಲಿನ ಹೈಕೋರ್ಟ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಸ್ಟಿಸ್‌‍ ಗವಾಯಿ ಅವರು ಆನ್‌ಲೈನ್‌ ವಿವಾದ ಪರಿಹಾರ ವೇದಿಕೆ, ವಿ-ಸಾಲ್ವ್‌‍ ವರ್ಚುವಲ್‌ ಸೊಲ್ಯೂಷನ್‌ ಮೇಕರ್‌ ಅನ್ನು ಸಹ ಪ್ರಾರಂಭಿಸಿದರು, ಇದು ಎಲ್ಲಾ ಮಧ್ಯಸ್ಥಗಾರರಿಂದ ಆನ್‌ಲೈನ್‌ ಚರ್ಚೆಗಳನ್ನು ಸುಗಮಗೊಳಿಸುತ್ತದೆ.* ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಎಸ್‌‍ಸಿ/ಎಸ್‌‍ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಬಡ್‌ ಕಾಯ್ದೆ (ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ, 2019) ಅಡಿಯಲ್ಲಿ ಪ್ರಕರಣಗಳನ್ನು ನಿರ್ವಹಿಸಲು ಮೀಸಲಾಗಿರುವ ವಿಶೇಷ ನ್ಯಾಯಾಲಯಗಳನ್ನು ಎರ್ನಾಕುಲಂ ಮತ್ತು ಅಲಪ್ಪುಳದಲ್ಲಿ ಉದ್ಘಾಟಿಸಿದರು.