* 2025–26ನೇ ಸಾಲಿನ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷರಾಗಿ ಬಿ.ಆರ್. ಗಣೇಶ್ ರಾವ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.* ಗಣೇಶ್ ರಾವ್ ಅವರು ಅನುಭವಿ ಉದ್ಯಮಿಯಾಗಿದ್ದು, ಎರಡು ದಶಕಗಳಿಗೂ ಹೆಚ್ಚು ಕಾಲ ಪೀಣ್ಯ ಕೈಗಾರಿಕೆಗಳ ಸಂಘ ಮತ್ತು ಕಾಸಿಯಾದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.* ಗಣೇಶ್ ರಾವ್ ಅವರು ಹಿಂದೆ ಕಾಸಿಯಾದಲ್ಲಿ ಖಜಾಂಚಿ, ಉಪಸಮಿತಿ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.* ಹೊಸ ಪದಾಧಿಕಾರಿಗಳಾಗಿ ನಿಂಗಣ್ಣ ಎಸ್. ಬಿರಾದರ್ (ಉಪಾಧ್ಯಕ್ಷರು), ಎಸ್.ಎಂ. ಹುಸೇನ್ (ಗೌರವ ಪ್ರಧಾನ ಕಾರ್ಯದರ್ಶಿ), ಆರ್. ಕೇಶವ ಮೂರ್ತಿ (ಜಂಟಿ ಕಾರ್ಯದರ್ಶಿ – ನಗರ), ದಿನೇಶ್ ಕುಮಾರ್ ವಿ. (ಜಂಟಿ ಕಾರ್ಯದರ್ಶಿ – ಗ್ರಾಮೀಣ), ಹಾಗೂ ಆರ್. ದುರೈ (ಖಜಾಂಚಿ) ನೇಮಕಗೊಂಡಿದ್ದಾರೆ.