* ಭಾರತದ ಸಂಸ್ಕೃತಿ ಮತ್ತು ಆಧ್ಯಾತ್ಮಕ್ಕೆ ಹೊಸ ಮೈಲುಗಲ್ಲು ನಿರ್ಮಿಸುವ ಮಹತ್ವದ ಘಟನೆಯಾಗಿ, ಗೋವಾದ ಕಾಣಕೋಣೆಯಲ್ಲಿ ನಿರ್ಮಿಸಲಾದ ಜಗತ್ತಿನ ಅತೀ ಎತ್ತರದ ಶ್ರೀರಾಮನ ಮೂರ್ತಿಯನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಕಾರ್ಯಕ್ರಮವು ದೇಶದ ಸಾಂಸ್ಕೃತಿಕ ಪರಂಪರೆ, ಭಕ್ತಿ ಚಳವಳಿ, ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಮಹತ್ತರ ಉತ್ತೇಜನ ನೀಡುವಂತಿದೆ.* ಕಾಣಕೋಣೆಯಲ್ಲಿರುವ ಪರ್ತಗಾಳಿ ಜೀವೋತ್ತಮ ಮಠವನ್ನು ಇಂದಿನ ದಿನಗಳಲ್ಲಿ “ದಕ್ಷಿಣ ಅಯೋಧ್ಯೆ” ಎಂದೇ ಗುರುತಿಸಲಾಗುತ್ತಿದೆ. ಈ ಮಠದ ಆವರಣದಲ್ಲಿ ಬಿಲ್ಲಿನಾಕಾರದ ಆದರ್ಶ ಧಾಮ್ (Model Spiritual Complex) ನಿರ್ಮಿಸಲಾಗಿದೆ. ಈ ಧಾಮ್‌ನ ಕೇಂದ್ರ ಆಕರ್ಷಣೆಯೇ ಇಂದು ಅನಾವರಣಗೊಳ್ಳುವ 77 ಅಡಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿ.* ಶ್ರೀರಾಮ ಪ್ರತಿಮೆಯು ವಿಶೇಷವಾಗಿ 77 ಅಡಿ ಜಗತ್ತಿನಲ್ಲೇ ಅತೀ ಎತ್ತರದ ಶ್ರೀರಾಮ ಪ್ರತಿಮೆ ಹಾಗೂ ಸಂಪೂರ್ಣವಾಗಿ ಕಂಚಿನಿಂದ ನಿರ್ಮಿತವಾಗಿದೆ. ವಿಶಿಷ್ಟ ಶಿಲ್ಪಕಲೆ, ಮುಖಭಾವ, ಮತ್ತು ಧರ್ಮಶಾಸ್ತ್ರಗಳಿಗೆ ಅನುಗುಣವಾದ ನಿಖರ ವಿನ್ಯಾಸ.* ಮೂರ್ತಿಯ ಆಧಾರದ ವೇದಿಕೆ ಬಿಲ್ಲಿನ ಆಕಾರದಲ್ಲಿ ನಿರ್ಮಿಸಲಾಗಿದೆ. ಶ್ರೀರಾಮನ ಧನುರ್ದಾರಿ ಸ್ವರೂಪವನ್ನು ಸೂಚಿಸುವುದರಿಂದ ಇದು ಅಂತಾರಾಷ್ಟ್ರೀಯ ಮಟ್ಟದ ಆಕರ್ಷಣೆ. * ಭವ್ಯ ಆಧ್ಯಾತ್ಮಿಕ ಸಂಕೀರ್ಣ ಧ್ಯಾನ ಮಂದಿರ, ಪ್ರವಾಸಿಗರಿಗೆ ಮಾಹಿತಿ ಕೇಂದ್ರ, ಭಕ್ತರಿಗಾಗಿ ಸೌಲಭ್ಯಗಳು, ಯೋಗ–ಧ್ಯಾನ ಕೇಂದ್ರ, ಇವೆಲ್ಲವನ್ನು ಒಳಗೊಂಡ ಆಧುನಿಕ–ಸಾಂಪ್ರದಾಯಿಕ ಸಂಕಲನ.* ಈ ಮೂರ್ತಿಯನ್ನು ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಬೆಂಗಳೂರಿನಲ್ಲಿ ಕೆಂಪೇಗೌಡರ ಮೂರ್ತಿಗಳನ್ನು ವಿನ್ಯಾಸಗೊಳಿಸಿದ ಪ್ರಖ್ಯಾತ ಶಿಲ್ಪಿ `ಪದ್ಮಭೂಷಣ' ಪುರಸ್ಕೃತ ರಾಮ ಸುತಾರ್ ಅವರೇ ಈ ಶ್ರೀರಾಮನ ಮೂರ್ತಿಯನ್ನು ನಿರ್ಮಿಸಿದ್ದಾರೆ.* ಪ್ರಧಾನಿ ಮೋದಿ ಅವರಿಂದ ನಡೆಯುತ್ತಿರುವ ಈ ಲೋಕಾರ್ಪಣೆ ಕೇವಲ ಒಂದು ಕಾರ್ಯಕ್ರಮವಲ್ಲ; ಇದು ಸಾಂಸ್ಕೃತಿಕ ಪುನರುತ್ಥಾನದ ಸಂಕೇತ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಬಲವರ್ಧನೆ ರಾಮಾಯಣ ಆಸ್ಥೆಯ ಗೌರವ ಹಾಗೂ ರಾಷ್ಟ್ರದ ಪರಂಪರೆಯ ಆಚರಣೆ ಇದರಿಂದ ಕಾಣಕೋಣೆ ಮತ್ತು ಗೋವಾ ರಾಜ್ಯವು ಭವಿಷ್ಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯಾತ್ರಿಕರು ಭೇಟಿ ನೀಡುವ ಮಹತ್ವದ ಆಧ್ಯಾತ್ಮಿಕ ತಾಣ ಆಗಲಿದೆ.