* ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಸಾರನಾಥ ಬುದ್ಧ ವಿಹಾರದಲ್ಲಿ ಜಗತ್ತಿನಲ್ಲೆ ಅತ್ಯಂತ ಎತ್ತರದ 888 ಅಡಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಲು ಚಿಂತನೆ ನಡೆದಿದೆ. * ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದತ್ತ ಭಂತೇಜೀ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉಪಾಸಕ ಮತ್ತು ಉಪಾಸಕಿ ಧಾರ್ಮಿಕ ಸಂಘ ಸ್ಥಾಪನೆಗೆ ಡಿಸೆಂಬರ್ 23 ರಂದು ಪೂರ್ವಭಾವಿ ಸಭೆ ನಡೆಯಿತು. * ಈ ಪೂರ್ವಭಾವಿ ಸಭೆ ತೀರ್ಮಾನಗಳೇನೆಂದರೆ ಅಂತಾರಾಷ್ಟ್ರೀಯ ಮಟ್ಟದ ಉಪಾಸಕ ಉಪಾಸಕಿಯರ ಧಾರ್ಮಿಕ ಸಂಘಟನೆ ಕಟ್ಟುವುದು. ಪ್ರತಿ ಸದಸ್ಯರು ಮಾಸಿಕ ₹100 ವಂತಿಕೆ ನೀಡುವುದು.