* ಧಾರವಾಡದ ಡಾ. ಎಸ್.ಆರ್. ಗುಂಜಾಳ 2024–25ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಫೆ. 13ರಂದು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದರು.* 2024–25ನೇ ಸಾಲಿನ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗೆ ಅಸ್ಸಾಂ ಮೂಲದ ಪಟಿಯಾಲ ಘರಾಣದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ, ಮುಂಬೈಯಲ್ಲಿ ವಾಸವಿರುವ ಬೇಗಂ ಪರ್ವೀನ್ ಸುಲ್ತಾನಾ, ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ವಚನಕಾರರು ಮತ್ತು ವಚನ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಕೃತಿಗಳನ್ನು ರಚಿಸಿರುವ ಗುಲ್ಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಮಾಜಿ ಮುಖ್ಯಸ್ಥ ಎಸ್.ಆರ್. ಗುಂಜಾಳ ಅವರು ಪುರಸ್ಕೃತರಾಗಿದ್ದಾರೆ.* ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಸೇರಿ ಐದು ವಿಭಾಗಗಳಲ್ಲಿ 19 ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದ 20 ಸಾಧಕರ ಹೆಸರುಗಳನ್ನು ಪ್ರಕಟಿಸಿದರು.* ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿಗೆ ಪಂಡಿತರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ (ಬೆಂಗಳೂರು) ಮತ್ತು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಬಸಪ್ಪ ಎಚ್. ಭಜಂತ್ರಿ (ಬಾಗಲಕೋಟೆ) ಆಯ್ಕೆಯಾಗಿದ್ದಾರೆ.* ರಾಷ್ಟ್ರೀಯ, ಸಾಮಾಜಿಕ-ಸಾಂಸ್ಕೃತಿಕ, ಸಾಹಿತ್ಯ-ನಾಟಕ, ಕಲಾ, ಹಾಗೂ ಸಂಗೀತ-ನೃತ್ಯ ಪ್ರಶಸ್ತಿಗಳ ಆಯ್ಕೆ ಸಮಿತಿಗಳನ್ನು ನೇಮಕ ಮಾಡಲಾಗಿತ್ತು. ಸಮಿತಿಗಳು ಶಿಫಾರಸು ಮಾಡಿದವರನ್ನೇ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ತಂಗಡಗಿ ಸ್ಪಷ್ಟಪಡಿಸಿದರು.* ಸಾಮಾಜಿಕ–ಸಾಂಸ್ಕೃತಿಕ ಪ್ರಶಸ್ತಿಗಳ ವಿಭಾಗ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ;ಕೆ. ರಾಜಕುಮಾರ್ ಕೋಲಾರ ಅಕ್ಕಮಹಾದೇವಿ ಪ್ರಶಸ್ತಿ; ಹೇಮಾ ಪಟ್ಟಣಶೆಟ್ಟಿ ಧಾರವಾಡ ಸಾಹಿತ್ಯ–ನಾಟಕ ಪ್ರಶಸ್ತಿಗಳ ವಿಭಾಗ ಪಂಪ ಪ್ರಶಸ್ತಿ; ಬಿ.ಎ. ವಿವೇಕ ರೈ ದಕ್ಷಿಣ ಕನ್ನಡ ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ; ಸ. ರಘುನಾಥ ಕೋಲಾರ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ; ವೈ.ಸಿ. ಭಾನುಮತಿ ಹಾಸನ ಬಿ.ವಿ. ಕಾರಂತ ಪ್ರಶಸ್ತಿ; ಜೆ. ಲೋಕೇಶ್; ಬೆಂಗಳೂರು ಗುಬ್ಬಿ ವೀರಣ್ಣ ಪ್ರಶಸ್ತಿ; ಕೆ. ನಾಗರತ್ನಮ್ಮ ಮರಿಯಮ್ಮನಹಳ್ಳಿ ವಿಜಯನಗರ ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ; ಎಲ್. ಹನುಮಂತಯ್ಯ ಬೆಂಗಳೂರು ಕಲಾ ಪ್ರಶಸ್ತಿಗಳ ವಿಭಾಗ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ; ಎಂ.ಜೆ. ಕಮಲಾಕ್ಷಿ ಬೆಂಗಳೂರು ಜಕಣಾಚಾರಿ ಪ್ರಶಸ್ತಿ: ಎಂ. ರಾಮಮೂರ್ತಿ ಬೆಂಗಳೂರು ಜಾನಪದ ಶ್ರೀ ಪ್ರಶಸ್ತಿ (ಇಬ್ಬರಿಗೆ); ನಿಂಗಪ್ಪ ಭಜಂತ್ರಿ ಕಲಬುರಗಿ (ವಾದನ) ಮತ್ತು ದೊಡ್ಡ ಗವಿಬಸಪ್ಪ ಚಾಮರಾಜನಗರ (ಗಾಯನ) ಸಂಗೀತ– ನೃತ್ಯ ಪ್ರಶಸ್ತಿಗಳ ವಿಭಾಗ ಶ್ರೀ ನಿಜಗುಣ-ಪುರಂದರ ಪ್ರಶಸ್ತಿ;ಅನಂತ ತೇರದಾಳ ಬೆಳಗಾವಿ (ಹಿಂದೂಸ್ಥಾನಿ ಗಾಯನ) ಕುಮಾರವ್ಯಾಸ ಪ್ರಶಸ್ತಿ:ಎ.ವಿ. ಪ್ರಸನ್ನ ಹಾಸನ (ಗಮಕ ವ್ಯಾಖ್ಯಾನ) ಶಾಂತಲಾ ನಾಟ್ಯ ಪ್ರಶಸ್ತಿ: ಪದ್ಮಿನಿ ರವಿ ಬೆಂಗಳೂರು (ಭರತನಾಟ್ಯ) ಸಂತ ಶಿಶುನಾಳ ಷರೀಫ ಪ್ರಶಸ್ತಿ: ಎಸ್. ಮಲ್ಲಣ್ಣ ಚಾಮರಾಜನಗರ (ಸುಗಮ ಸಂಗೀತ)* ಕಲಾವಿದರ ಮಾಸಾಶನವನ್ನು ₹3 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಅರ್ಹ ಸಂಸ್ಥೆಗಳಿಗೆ ಧನ ಸಹಾಯ ಪುನಃ ಪ್ರಾರಂಭಿಸಲಾಗುತ್ತದೆ. ಈ ವರ್ಷ ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೆ ಚರ್ಚೆ ನಡೆಯುತ್ತಿದೆ, ಮುಖ್ಯಮಂತ್ರಿ ಜೊತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.