Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಹರೀಶ್ ರಾಣಾ ಪ್ರಕರಣ: 'ಘನತೆಯಿಂದ ಸಾಯುವ ಹಕ್ಕು' ಮೂಲಭೂತ ಹಕ್ಕು ಎಂದ ಸುಪ್ರೀಂ ಕೋರ್ಟ್
Authored by:
Akshata Halli
Date:
12 ಮಾರ್ಚ್ 2026
➤
ನವದೆಹಲಿ:
ಕಳೆದ 13 ವರ್ಷಗಳಿಂದ 'ಕೋಮಾ' (Persistent Vegetative State) ಸ್ಥಿತಿಯಲ್ಲಿದ್ದ 31 ವರ್ಷದ ಯುವಕ ಹರೀಶ್ ರಾಣಾ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ(11-03-2026)
'ಪ್ಯಾಸಿವ್ ಯುತನೇಷ್ಯಾ' (Passive Euthanasia) ಅಥವಾ ದಯಾಮರಣಕ್ಕೆ
ಅನುಮತಿ ನೀಡಿದೆ. ಇದು ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ಭಾವನಾತ್ಮಕ ಮತ್ತು ಕಾನೂನಾತ್ಮಕ ಮಹತ್ವದ ತೀರ್ಪುಗಳಲ್ಲಿ ಒಂದಾಗಿದೆ.
➤
ಪ್ರಕರಣದ ಹಿನ್ನೆಲೆ:
ಗಾಜಿಯಾಬಾದ್ನ ಹರೀಶ್ ರಾಣಾ 2013ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಓದುತ್ತಿದ್ದಾಗ, ತಮ್ಮ ವಸತಿಗೃಹದ 4ನೇ ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿದ್ದರು.
ಅಂದಿನಿಂದ ಹರೀಶ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೃತಕ ಪೈಪ್ಗಳ ಮೂಲಕ ಆಹಾರ ಮತ್ತು ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.
ವಯಸ್ಸಾದ ಪೋಷಕರು ದಶಕಕ್ಕೂ ಹೆಚ್ಚು ಕಾಲ ಮಗನ ಆರೈಕೆ ಮಾಡಿದ್ದರು. ಇತ್ತೀಚೆಗೆ ಮಗನ ಪರಿಸ್ಥಿತಿ ಕಂಡು ಮರುಗಿದ ಪೋಷಕರು, ಆತನಿಗೆ ಈ ನರಕಯಾತನೆಯಿಂದ ಮುಕ್ತಿ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
➤
ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಅಂಶಗಳು:
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ. ವಿಶ್ವನಾಥನ್
ಅವರ ಪೀಠವು ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:
- ಘನತೆಯಿಂದ ಸಾಯುವ ಹಕ್ಕು:
ಸಂವಿಧಾನದ ವಿಧಿ 21ರ ಅಡಿಯಲ್ಲಿ ಜೀವಿಸುವ ಹಕ್ಕಿನಂತೆಯೇ, ಒಬ್ಬ ವ್ಯಕ್ತಿ ಘನತೆಯಿಂದ ಸಾಯುವ ಹಕ್ಕನ್ನು ಕೂಡ ಹೊಂದಿದ್ದಾನೆ.
- ಶೇಕ್ಸ್ಪಿಯರ್ ಉಲ್ಲೇಖ:
ತೀರ್ಪು ನೀಡುವಾಗ ನ್ಯಾ. ಪಾರ್ದೀವಾಲಾ ಅವರು ವಿಲಿಯಂ ಶೇಕ್ಸ್ಪಿಯರ್ನ ಹ್ಯಾಮ್ಲೆಟ್ ನಾಟಕದ ಪ್ರಸಿದ್ಧ ಸಾಲು "To be, or not to be" (ಇರಬೇಕೇ ಅಥವಾ ಬೇಡವೇ) ಎಂಬುದನ್ನು ಉಲ್ಲೇಖಿಸಿ, ಸಾವಿನ ಹಕ್ಕನ್ನು ನಿರ್ಧರಿಸುವ ಅನಿವಾರ್ಯತೆಯನ್ನು ವಿವರಿಸಿದರು.
- ವೈದ್ಯಕೀಯ ಮಂಡಳಿ ವರದಿ:
ಏಮ್ಸ್ (AIIMS) ವೈದ್ಯಕೀಯ ಮಂಡಳಿಯು ಹರೀಶ್ ಚೇತರಿಸಿಕೊಳ್ಳುವ ಸಾಧ್ಯತೆ ಶೂನ್ಯ ಎಂದು ವರದಿ ನೀಡಿದ್ದನ್ನು ಕೋರ್ಟ್ ಪುರಸ್ಕರಿಸಿತು.
- ಮಾನವೀಯ ವಿದಾಯ:
ಜೀವರಕ್ಷಕ ವ್ಯವಸ್ಥೆಯನ್ನು ಹಿಂಪಡೆಯುವಾಗ ರೋಗಿಗೆ ನೋವಾಗದಂತೆ ಮತ್ತು ಮಾನವೀಯ ರೀತಿಯಲ್ಲಿ ಪ್ರಕ್ರಿಯೆ ನಡೆಸಬೇಕು ಎಂದು ಏಮ್ಸ್ ಆಸ್ಪತ್ರೆಗೆ ಸೂಚಿಸಿದೆ.
➤
ದಯಾಮರಣ:
ಭಾರತದಲ್ಲಿ ದಯಾಮರಣವನ್ನು ಎರಡು ವಿಧಗಳಲ್ಲಿ ವಿಶ್ಲೇಷಿಸಲಾಗುತ್ತದೆ:
- Active Euthanasia (ಸಕ್ರಿಯ ದಯಾಮರಣ):
ರೋಗಿಯ ಸಾವಿಗೆ ಕಾರಣವಾಗುವಂತೆ ವಿಷಕಾರಿ ಇಂಜೆಕ್ಷನ್ ನೀಡುವುದು. ಇದು ಭಾರತದಲ್ಲಿ ಅನೈತಿಕ ಮತ್ತು ಕಾನೂನುಬಾಹಿರ.
- Passive Euthanasia (ನಿಷ್ಕ್ರಿಯ ದಯಾಮರಣ):
ಚಿಕಿತ್ಸೆ ಅಥವಾ ಕೃತಕ ಜೀವರಕ್ಷಕ ವ್ಯವಸ್ಥೆಯನ್ನು (ವೆಂಟಿಲೇಟರ್, ಫೀಡಿಂಗ್ ಟ್ಯೂಬ್) ಹಿಂಪಡೆಯುವ ಮೂಲಕ ಸಾವು ಸಂಭವಿಸಲು ಬಿಡುವುದು. ಭಾರತದಲ್ಲಿ ಇದಕ್ಕೆ ಷರತ್ತುಬದ್ಧ ಅನುಮತಿ ಇದೆ.
➤
ಕಾನೂನು ಚೌಕಟ್ಟು ಮತ್ತು ಇತಿಹಾಸ:
- ಅರುಣಾ ಶಾನಭಾಗ್ ಪ್ರಕರಣ (2011):
42 ವರ್ಷಗಳ ಕಾಲ ಕೋಮಾದಲ್ಲಿದ್ದ ದಾದಿ ಅರುಣಾ ಅವರಿಗೆ ಅಂದು ಸುಪ್ರೀಂ ಕೋರ್ಟ್ ದಯಾಮರಣ ನಿರಾಕರಿಸಿತ್ತು. ಆದರೆ, 'ನಿಷ್ಕ್ರಿಯ ದಯಾಮರಣ'ಕ್ಕೆ ಹಾದಿ ಮಾಡಿಕೊಟ್ಟಿತ್ತು.
- ಕಾಮನ್ ಕಾಸ್ ತೀರ್ಪು (2018):
ದಯಾಮರಣವು ಮೂಲಭೂತ ಹಕ್ಕು ಎಂದು ಸಂವಿಧಾನ ಪೀಠ ಘೋಷಿಸಿತು.
- 2023ರ ಪರಿಷ್ಕೃತ ಮಾರ್ಗಸೂಚಿ:
ದಯಾಮರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ಜಿಲ್ಲಾಧಿಕಾರಿಗಳ ಬದಲಿಗೆ ವೈದ್ಯಕೀಯ ಮಂಡಳಿಗಳಿಗೇ ಹೆಚ್ಚಿನ ಅಧಿಕಾರ ನೀಡಲಾಯಿತು.
Take Quiz
Loading...