Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಎಪಿಜೆ ಅಬ್ದುಲ್ ಕಲಾಂ ನಂತರ ಜಲಾಂತರ್ಗಾಮಿ ನೌಕೆಯಲ್ಲಿ ಪಯಣಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
Authored by:
Akshata Halli
Date:
29 ಡಿಸೆಂಬರ್ 2025
*
ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾನುವಾರ (29-December- 2025) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆಯಲ್ಲಿ ಐತಿಹಾಸಿಕ ಸಂಚಾರ ನಡೆಸಿದರು.
ಸಮುದ್ರದ ಆಳದಲ್ಲಿ ಗಂಟೆಗೂ ಹೆಚ್ಚು ಕಾಲ ನಡೆದ ಈ ಪಯಣದ ಮೂಲಕ ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣ ಮಾಡಿದ
ಎರಡನೇ ರಾಷ್ಟ್ರಪತಿ
ಯಾಗುವ ಗೌರವವನ್ನು ಅವರು ಪಡೆದರು. ಇದಕ್ಕೂ ಮೊದಲು
2006ರಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ
ಅವರು ಇದೇ ರೀತಿಯ ಸಂಚಾರ ನಡೆಸಿದ್ದರು.
* ನೌಕಾದಳದ ವಿಶೇಷ ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು ಅವರನ್ನು
ರಾಜ್ಯಪಾಲ ಥಾವರಚಂದ್ ಗೆಹೋಟ್
ಸ್ವಾಗತಿಸಿದರು. ಬಳಿಕ ನೌಕಾ ಸಮವಸ್ತ್ರ ಧರಿಸಿ ಜಲಾಂತರ್ಗಾಮಿ ನೌಕೆಗೆ ತೆರಳಿದ ಅವರು ನೌಕಾಪಡೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಈ ಸಂಚಾರದ ವೇಳೆ
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ
ಅವರು ರಾಷ್ಟ್ರಪತಿಗೆ ಸಾಥ್ ನೀಡಿದರು.
* ಈ ಘಟನೆ ಭಾರತೀಯ ನೌಕಾಪಡೆಯ ಸಾಮರ್ಥ್ಯ, ತಾಂತ್ರಿಕ ಪ್ರಗತಿ ಮತ್ತು ರಾಷ್ಟ್ರದ ಸಮುದ್ರ ಭದ್ರತೆಗೆ ನೀಡಿರುವ ಬಲಿಷ್ಠ ಸಂದೇಶವಾಗಿದ್ದು,
‘ಆತ್ಮನಿರ್ಭರ ಭಾರತ’
ಯೋಜನೆಯಡಿ ನಿರ್ಮಿತ
ಪಿ–75 ಸ್ಕಾರ್ಪಿನ್ ಯೋಜನೆ
ಯ ಮಹತ್ವವನ್ನೂ ಪ್ರತಿಬಿಂಬಿಸುತ್ತದೆ. 2025ರ ಜನವರಿಯಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡ
ಐಎನ್ಎಸ್ ವಾಗೀರ್
ಈ ಯೋಜನೆಯ ಅಂತಿಮ ಜಲಾಂತರ್ಗಾಮಿ ನೌಕೆಯಾಗಿದೆ.
Take Quiz
Loading...