* ಕೇಂದ್ರ ಸಚಿವ ಸಂಪುಟವು ಧಾರವಾಡ ಸೇರಿದಂತೆ ದೇಶದ ಐದು ಪ್ರಮುಖ ಐಐಟಿಗಳಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ 11,828.79 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಿದೆ.* ಈ ಐಐಟಿಗಳು – ಧಾರವಾಡ (ಕರ್ನಾಟಕ), ತಿರುಪತಿ (ಆಂಧ್ರಪ್ರದೇಶ), ಭಿಲಾಯಿ (ಛತ್ತೀಸ್ಗಢ), ಜಮ್ಮು (ಜಮ್ಮು-ಕಾಶ್ಮೀರ) ಮತ್ತು ಪಾಲಕ್ಕಾಡ್ (ಕೇರಳ) – ಶಿಕ್ಷಣ ಹಾಗೂ ಸಂಶೋಧನ ಕ್ಷೇತ್ರಗಳಲ್ಲಿ ಶಕ್ತಿಯುತವಾಗಿ ಬೆಳೆಸಲು ಕ್ರಮ ಕೈಗೊಳ್ಳಲಾಗುತ್ತಿದೆ.* ವಿಸ್ತರಣೆ ಯೋಜನಾ ಮೂಲಕ 6,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಧ್ಯಯನದ ಅವಕಾಶ ಸಿಗಲಿದೆ. ಕೈಗಾರಿಕೆ-ಶೈಕ್ಷಣಿಕ ಸಂಬಂಧವನ್ನು ಬಲಪಡಿಸಲು ಐದು ಅತ್ಯಾಧುನಿಕ ಸಂಶೋಧನಾ ಪಾರ್ಕ್ಗಳನ್ನು ಸ್ಥಾಪಿಸಲಾಗುತ್ತದೆ.* ಈ ಯೋಜನೆ 2025-26ರಿಂದ 2028-29ರವರೆಗೆ ಅನುಷ್ಟಾನಗೊಳ್ಳಲಿದ್ದು, ಅದರಲ್ಲಿ 130 ಪ್ರಾಧ್ಯಾಪಕರ ಹುದ್ದೆಗಳನ್ನೂ ಸೃಷ್ಟಿಸಲಾಗುತ್ತದೆ.* ಹಂತ ಹಂತವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಗರಿಯನ್ನು ಹೊಂದಿದ್ದು, ಈ ಐಐಟಿಗಳ ಒಟ್ಟು ಸಾಮರ್ಥ್ಯವನ್ನು 7,111 ರಿಂದ 13,687ರವರೆಗೆ ಹೆಚ್ಚಿಸಲು ಯೋಜಿಸಲಾಗಿದೆ.* ಈ ಮೂಲಕ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನದ ಆಸೆಯಿರುವ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.* ಕಳೆದ ದಶಕದಲ್ಲಿ ದೇಶದ ಐಐಟಿಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಶೇ.100ರಷ್ಟು ಹೆಚ್ಚಾಗಿದೆ. 2014 ನಂತರ ಸ್ಥಾಪಿತ ಐದು ಐಐಟಿಗಳಿಗೆ ಹೆಚ್ಚುವರಿ ಮೂಲಸೌಕರ್ಯ ನೀಡಲಾಗುತ್ತಿದೆ.* ಈ ವಿಸ್ತರಣೆ ಯಂತ್ರಣೆಯಿಂದ ನೇರ ಉದ್ಯೋಗ ಸೃಷ್ಟಿ, ವಸತಿ, ಸಾರಿಗೆ, ಸೇವೆಗಳ ಅಭಿವೃದ್ಧಿ, ಸ್ಥಳೀಯ ಆರ್ಥಿಕತೆಯ ಉತ್ತೇಜನ ಹಾಗೂ ನವೋದ್ಯಮ ಪರಿಸರದ ವಿಸ್ತರಣೆಯೂ ಸಾಧ್ಯವಾಗಲಿದೆ.