Job Description: ನವದೆಹಲಿ : ಈ ವರ್ಷ ಗಣರಾಜ್ಯ ದಿನದ ಪರೇಡ್ನಲ್ಲಿ ಭಾಗವಹಿಸಿದ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು, ಇವುಗಳ ಪೈಕಿ ಅಸ್ಸಾಂನ ಟ್ಯಾಬ್ಲೋ 'ಅತ್ಯುತ್ತಮ ಸ್ತಬ್ಧಚಿತ್ರ' ಎಂಬ ಪ್ರಶಸ್ತಿಗೆ ಭಾಜನವಾಗಿದೆ. 'ವಿಶಿಷ್ಟ ಕರಕುಶಲತೆ ಮತ್ತು ಸಂಸ್ಕೃತಿಯ ನೆಲ' ಎಂಬ ಸಂದೇಶ ಇಟ್ಟುಕೊಂಡು ಅಸ್ಸಾಂ ಸ್ತಬ್ಧಚಿತ್ರವನ್ನು ರಚಿಸಿ ಪೆರೇಡನಲ್ಲಿ ಭಾಗವಹಿಸಿತ್ತು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅಸ್ಸಾಂಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.