* ಇತ್ತೀಚಿಗೆ ಸರ್ಕಾರ ಹಾಗೂ ಬ್ಯಾಂಕಿಂಗ್ ಕ್ಷೇತ್ರ ಡಿಜಿಟಲೀಕರಣದತ್ತ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟು, ನಗರ ಸಹಕಾರಿ ಬ್ಯಾಂಕ್‌ಗಳಿಗೆ ವಿಶೇಷವಾಗಿ ನಿರ್ಮಿತವಾದ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದೆ.ಈ ನಗರ ಸಹಕಾರಿ ಬ್ಯಾಂಕಗಳಲ್ಲಿ ಡಿಜಿಟಲ್ ಪಾವತಿಯ ಬಳಕೆಯನ್ನು ಹೆಚ್ಚಿಸಲು 'ಸಹಕಾರ ಡಿಜಿ ಪೇ' ಮತ್ತು 'ಸಹಕಾರ ಡಿಜಿ ಲೋನ್' ಎಂಬ ಎರಡು ಮೊಬೈಲ್ ಆ್ಯಪ್‌ ಗಳಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸೋಮವಾರ ಚಾಲನೆ ನೀಡಿದ್ದಾರೆ.* ಇದರ ಉದ್ದೇಶ ಬ್ಯಾಂಕಿಂಗ್ ಸೇವೆಗಳನ್ನು ಸಾರ್ವಜನಿಕರಿಗೆ ಹೆಚ್ಚು ಸುಲಭ, ವೇಗ ಹಾಗೂ ಪಾರದರ್ಶಕವಾಗಿ ಒದಗಿಸುವುದು. ಈಗ ಗ್ರಾಹಕರು ಬ್ಯಾಂಕ್‌ಗೆ ಹೋಗದೆ ಮನೆಯಲ್ಲೇ ಮೊಬೈಲ್ ಮೂಲಕ ವ್ಯವಹಾರಗಳನ್ನು ನಡೆಸಬಹುದು.* ಈ ಆ್ಯಪ್‌ ಮೂಲಕ ಗ್ರಾಹಕರು ಖಾತೆ ಶೇಷ ಪರಿಶೀಲನೆ, ಹಣ ವರ್ಗಾವಣೆ, ಮಿನಿ ಸ್ಟೇಟ್ಮೆಂಟ್, ಸೇವಿಂಗ್ / ಕೆರೆಂಟ್ ಅಕೌಂಟ್ ವಿವರಗಳು, ಸಾಲದ ಬಾಕಿ ಮಾಹಿತಿ, ಫಿಕ್ಸ್ಡ್ ಡೆಪಾಸಿಟ್‌ಗಳ ವಿವರ ಹಾಗೂ ಇ-ಪಾಸ್‌ಬುಕ್ ಸೇವೆಗಳನ್ನು ಪಡೆಯಬಹುದು.* ಆ್ಯಪ್‌ನಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿ ಹಾಗೂ ಹಣಕಾಸು ಮಾಹಿತಿಯನ್ನು ಸಂರಕ್ಷಿಸಲು ಮಲ್ಟಿ-ಲೇಯರ್ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. OTP ಆಧಾರಿತ ಲಾಗಿನ್ ವ್ಯವಸ್ಥೆ, ಎನ್ಕ್ರಿಪ್ಟೆಡ್ ಡೇಟಾ ಟ್ರಾನ್ಸ್ಫರ್, ಹಾಗೂ ಬಯೋಮೆಟ್ರಿಕ್ ಲಾಕ್ ಹೀಗಿನ ಫೀಚರ್‌ಗಳು ಬಳಕೆದಾರರ ಡೇಟಾ ಸುರಕ್ಷತೆಯಲ್ಲಿ ಸಹಾಯಕವಾಗುತ್ತವೆ.* ಸರ್ಕಾರ, RBI ಹಾಗೂ NABARD ತಾಂತ್ರಿಕ ಹಾಗೂ ಆಡಳಿತಿಕ ಸಹಕಾರವನ್ನು ನೀಡಿ ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ. “ಎಲ್ಲರಿಗೂ ಬ್ಯಾಂಕಿಂಗ್ – ಎಲ್ಲೆಡೆ ಬ್ಯಾಂಕಿಂಗ್” ಎಂಬ ಗುರಿ ಸಾಧನೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ದೇಶದ ಆರ್ಥಿಕ ವಲಯವನ್ನು ಡಿಜಿಟಲೀಕರಣದ ಮೂಲಕ ಮತ್ತಷ್ಟು ವಿಸ್ತರಿಸುವುದು ಸರ್ಕಾರದ ಉದ್ದೇಶ.* ಮುಂದಿನ ಹಂತಗಳಲ್ಲಿ ಈ ಆ್ಯಪ್‌ಗೆ ಇನ್ಶುರ್‌ಟೆಕ್, ಮೈಕ್ರೋ ಕ್ರೆಡಿಟ್, ಮೈಕ್ರೋ ಎಟಿಎಮ್ ಸೌಲಭ್ಯಗಳು ಸೇರಿಸಲಾಗುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ, ಸಹಕಾರಿ ಬ್ಯಾಂಕ್‌ಗಳಿಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಇದು ನೆರವಾಗಬಹುದು.* ನಗರ ಸಹಕಾರಿ ಬ್ಯಾಂಕ್ ಆ್ಯಪ್‌ಗೆ ಚಾಲನೆ ನೀಡುವುದು ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೊಂದು ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿದ್ದು—ಸಾಮಾನ್ಯ ಜನರ ಜೀವನವನ್ನು ಇನ್ನಷ್ಟು ಸುಲಭ, ವೇಗ ಮತ್ತು ಸುರಕ್ಷಿತಗೊಳಿಸುವ ನಿರೀಕ್ಷೆ ಮೂಡಿಸಿದೆ.* ರಾಷ್ಟ್ರಿಯ ನಗರ ಸಹಕಾರಿ ಬ್ಯಾಂಕ್ ಹಾಗೂ ಪತ್ತಿನ ಸಂಸ್ಥೆಗಳ ಒಕ್ಕೂಟವು ಮುಂದಿನ ಐದು ವರ್ಷದೊಳಗೆ ಎರಡು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಪ್ರತಿ ಪಟ್ಟಣದಲ್ಲಿ ಕನಿಷ್ಠ ಒಂದಾದರು ಹೆಚ್ಚುವರಿ ನಗರ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಗುರಿ ಸಾಧಿಸಬೇಕು ಎಂದು ಸೂಚಿಸಿದ್ದಾರೆ.* 'ಡಿಜಿ ಪೇ' ಇಂದು ಅಗತ್ಯವಾಗಿದೆ.ನಗರ ಸಹಕಾರ ಬ್ಯಾಂಕ್ ಗಳು ಈ ಪಾವತಿ ವಿಧಾನಕ್ಕೆ ಹೊಂದಿಕೊಳ್ಳದಿದ್ದರೆ,ಸ್ಪರ್ಧೆಯಿಂದ ಹೊರಗುಳಿಯುತ್ತವೆ.ಎರಡು ವರ್ಷದೊಳಗೆ 1 ,500 ಬ್ಯಾಂಕ್ ಗಳು ಈ ಅಪ್ಲಿಕೇಶನ್ ಅನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.* ಎನ್ಎಫ್ ಸಿ ಯು ಬಿ ಗೌರವಾಧ್ಯಕ್ಷ ಮತ್ತು ಕರ್ನಾಟಕ ಕಾನೂನು ಸಚಿವ ಎಚ್.ಕೆ.ಪಾಟೀಲ್,20 ನಗರ ಸಹಕಾರ ಬ್ಯಾಂಕ್ ಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು.ಇವುಗಳ ಪುನರ್ ಜೀವನಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದರು.