* ಭಾರತ ಸರ್ಕಾರ ಭೂತಾನ್ಗೆ ಮೊದಲ ಬಾರಿ ರೈಲು ಸಂಪರ್ಕ ಕಲ್ಪಿಸಲು ಮುಂದಾಗಿದೆ. ಈಶಾನ್ಯ ರಾಜ್ಯಗಳಲ್ಲಿನ ಆಂತರಿಕ ಬಿಕ್ಕಟ್ಟಿನ ಕಾರಣದಿಂದ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ಗೆ ರೈಲು ಯೋಜನೆ ಸ್ಥಗಿತಗೊಂಡಿರುವ ನಡುವೆಯೇ, ಭಾರತ ಭೂತಾನ್ಗೆ ಸಂಪರ್ಕ ಒದಗಿಸಲು ಮುಂದಾಗಿದೆ. ಯೋಜನೆ ಜಾರಿಗೆ ಬಂದರೆ, ಭೂತಾನ್ ಮೊದಲ ಬಾರಿಗೆ ರೈಲ್ವೆ ಸಂಪರ್ಕ ಹೊಂದಲಿದೆ.* ಭಾರತ-ಭೂತಾನ್ 69 ಕಿ.ಮೀ. ಹೊಸ ರೈಲು ಮಾರ್ಗದ ₹3,500 ಕೋಟಿ ಪ್ರಸ್ತಾವಿತ ಹೊಸ ರೈಲು ಮಾರ್ಗದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದೆ. ಇದು ಅಸ್ಸಾಂನ ಕೊಕ್ರಝಾರ್ ಮತ್ತು ಭೂತಾನ್ನ ಗೆಲೆಫು ಪಟ್ಟಣವನ್ನು ಸಂಪರ್ಕಿಸಿ ವ್ಯಾಪಾರ, ಪ್ರವಾಸೋದ್ಯಮ, ಮತ್ತು ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ನೆರವು ನೀಡಲಿದೆ.* ಈಶಾನ್ಯ ಗಡಿನಾಡು ರೈಲ್ವೆಯ ಪ್ರಕಾರ, ಬಾಲಜನ್, ಗರುಭಾಸ, ರುಣಿಖಾತ, ಶಾಂತಿಪುರ, ದದ್ಗಿರಿ ಮತ್ತು ಗೆಲೆಫು (ಭೂತಾನ್) ಒಳಗೊಂಡ 6 ನಿಲ್ದಾಣಗಳ ಯೋಜನೆಗೆ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದು, ಡಿಪಿಆರ್ ಮೇಲಧಿಕಾರಿಗಳಿಗೆ ಕಳಿಸಲಾಗಿದೆ.* ಭಾರತದ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ಗೆ ರೈಲು ಸಂಪರ್ಕ ಯೋಜನೆಗಳು ರಾಜಕೀಯ ಅಸ್ಥಿರತೆಯಿಂದ ಸ್ಥಗಿತಗೊಂಡಿವೆ. ತ್ರಿಪುರಾ-ಬಾಂಗ್ಲಾದೇಶ ಮಾರ್ಗವು ಶೇಖ್ ಹಸೀನಾ ಸರ್ಕಾರದ ಪತನದಿಂದಾಗಿ ಮುಂದುವರಿಯದೆ ನಿಂತಿದೆ. ಮ್ಯಾನ್ಮಾರ್ನಲ್ಲಿ 2021ರಿಂದಿನ ಗಲಭೆಗಳ ಕಾರಣದಿಂದ ಅಲ್ಲಿನ ಯೋಜನೆಯೂ ವಿಳಂಬವಾಗಿದೆ.