* ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಗಳ ಸಚಿವ ನಿತಿನ್ ಗಡ್ಕರಿ ಅವರು ಶಂಕರ ಮಹಾದೇವನ್ ಸಂಗೀತ ಸಂಯೋಜನೆಯಿಂದ ರಸ್ತೆ ಸುರಕ್ಷತೆಯ ಕುರಿತ ಗೀತೆಯು 22 ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯೆಂದು ಘೋಷಿಸಿದ್ದಾರೆ* ಈ ಹಾಡು ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಬೇಕೆಂದು ಅವರು ಒತ್ತಾಯಿಸಿದರು.* ಉತ್ಕರ್ಷ್ ಇಂಡಿಯಾ ಲಿಮಿಟೆಡ್ನ ಅಧ್ಯಕ್ಷ ಸುನಿಲ್ ಬನ್ಸಾಲ್ ಅವರು ಬುದ್ಧಿವಂತ ರಸ್ತೆ ಮೂಲಸೌಕರ್ಯವು ಅಪಘಾತಗಳ ಪ್ರಮಾಣ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದು ಹೇಳಿದರು.* ಭಾರತದಲ್ಲಿ ವರ್ಷಕ್ಕೆ ಸುಮಾರು 4.8 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ ಮತ್ತು ಸುಮಾರು 1.88 ಲಕ್ಷ ಮಂದಿ ಸಾವನ್ನಪ್ಪುತ್ತಾರೆ ಎಂದು ಗಡ್ಕರಿ ಹೇಳಿದರು. * ಅಪಘಾತಗಳಿಂದ ದೇಶಕ್ಕೆ ವರ್ಷದಲ್ಲಿ GDP ಯ 3% ನಷ್ಟವಾಗುತ್ತಿದೆ. ಕಾನೂನಿಗೆ ಭಯ ಮತ್ತು ಗೌರವವಿಲ್ಲದಿರುವುದು ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.