* ಭಾರತೀಯ ಸೇನೆಯು 'ರುದ್ರ' ಬ್ರಿಗೇಡಗಳು ಮತ್ತು 'ಭೈರವ' ಕಮಾಂಡೋ ಬೆಟಾಲಿಯನಗಳನ್ನು ಒಳಗೊಂಡಂತೆ ಹೊಸ ಘಟಕಗಳನ್ನು ಪರಿಚಯಿಸುತ್ತಿದೆ.ಇದು ಭಾರತೀಯ ಸೇನೆಯ ಪುನರಚನೆ ಮತ್ತು ಆಧುನೀಕರಣ ಭಾಗವಾಗಿದೆ.ಭವಿಷ್ಯದ ಯುದ್ಧಗಳ ಸವಾಲುಗಳನ್ನು ಎದುರಿಸಲು ಈ ಘಟಕಗಳು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳನ್ನು ಬಳಸುತ್ತವೆ.ರುದ್ರ ಬ್ರಿಗೇಡಗಳು :* ಇವುಗಳು ಸೇನೆಯಲ್ಲಿ ಸಂಯೋಜಿತ ಶಸ್ತ್ರಾಸ್ತ್ರ ಹೋರಾಟದ ಒಂದು ಹೊಸ ರಚನೆಯಾಗಿದ್ದು,2018 ರಲ್ಲಿ ಪ್ರಾರಂಭವಾದ ಪುನರಚನೆಯ ಭಾಗವಾಗಿದೆ.* ಈಗಾಗಲೇ ಉತ್ತರ ಗಡಿಯಲ್ಲಿ ಒಂದು ಹಾಗೂ ಪಶ್ಚಿಮ ಗಡಿಯಲ್ಲಿ ಇನ್ನೊಂದು ರುದ್ರ ಬ್ರಿಗೇಡ್ ನಿಯೋಜಿಸಲಾಗಿದೆ. ಈ ಬ್ರಿಗೇಡಗಳಲ್ಲಿ ಎಲ್ಲ ವಿವಿಧ ತುಕಡಿಗಳು ಇರುವದರಿಂದ ಶ್ರೀಘ್ರವಾಗಿ ಯುದ್ಧಕ್ಕೆ ಸಿದ್ಧತೆ ನಡೆಸಿ ಅನಿರೀಕ್ಷಿತ ದಾಳಿಗಳನ್ನು ತಡೆಯಲು ಸಾಧ್ಯವಾಗಲಿದೆ.* ಇವು ಸೆಕ್ಟರ್ ಮಟ್ಟದಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸಲಿವೆ.*ಇದರಲ್ಲಿ ಪದಾತಿ ದಳ,ಟ್ಯಾಂಕ್ ಗಳು,ಆರ್ಮರ್ಡ್ ವೆಹಿಕಲಗಳು,ಧೀರ್ಘ ಶ್ರೇಣಿಯ ಫಿರಂಗಿಗಳ ದಳ,ಡ್ರೋನ್ ತರಬೇತಿ ಪಡೆದ ಯೋಧರು,ಲಾಜಿಸ್ಟಿಕಸ್ ಘಟಕಗಳು ಮತ್ತು ಕಮಾಂಡೋಗಳು ಇರಲಿದ್ದಾರೆ.ಭೈರವ ಕಮಾಂಡೋ ಬೆಟಾಲಿಯನಗಳು :* ಇವುಗಳನ್ನು ಹೆಚ್ಚಿಸಲಾಗಿದ್ದು,ಇದು ಆಧುನಿಕ ಯುದ್ಧ ತಂತ್ರಗಳಿಗೆ ಅನುಗುಣವಾಗಿ ಶಕ್ತಿಯುತ ಬೆಟಾಲಿಯನಗಳಾಗಿವೆ.* ಇವುಗಳು ಕೌಂಟರ್ -ಮಾನವರಹಿತ ವಿಮಾನ ನಿಯಂತ್ರಣ ಸಾಮರ್ಥ್ಯಗಳನ್ನು ಒಳಗೊಂಡಿವೆ.* ಭೈರವ ಕಮಾಂಡೋ ಗಳನ್ನೂ ಲೇಹ,ಶ್ರೀನಗರ,ನಗರೋಟಾ,ಪಶ್ಚಿಮ ಮತ್ತು ಈಶಾನ್ಯ ಭಾರತದಲ್ಲಿ ನಿಯೋಜಿಸಲಾಗುವುದು.ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗಳು ಸೇರಿದಂತೆ ಹಲವು ವಿಧದ ಯುದ್ಧ ಮತ್ತು ಸಂಘರ್ಷಗಳಲ್ಲಿ ಭೈರವ ಕಮಾಂಡೋಗಳನ್ನು ಬಳಸಲಾಗುವುದು.* ಆರಂಭದಲ್ಲಿ 5 ಭೈರವ ಪಡೆಗಳನ್ನು ಸ್ಥಾಪಿಸಲಾಯಿತು.ಬಳಿಕ ಹಂತ ಹಂತವಾಗಿ 6 ತಿಂಗಳೊಳಗೆ 250 ಕಮಾಂಡೋಗಳ 23 ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಾಲಾಗಿದೆ.ಈ ಕಮಾಂಡೋಗಳು ಸ್ವತಂತ್ರ ತುಕುಡಿಗಳಾಗಿ ಕಾರ್ಯನಿರ್ವಹಿಸುತ್ತಾರೆ.* ಈ ಹಿನ್ನೆಲೆಯಲ್ಲಿ ಭೈರವ ಕಮಾಂಡೋಗಳು ಘಾತಕ ಪಡೆಯ ಪರಂಪರೆ ಮುಂದುವರೆಸಿಕೊಂಡು ಹೊಗಲಿದ್ದಾರೆ.ಇವರು ವಿಶೇಷ ಪಡೆಗಳಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ ಪಡೆದಿದ್ದಾರೆ.* ಸೇನಾ ಪಡೆಗಳ ಆಧುನೀಕರಣದ ಭಾಗವಾಗಿ ಮತ್ತು ಯುದ್ಧ ಸಾಮರ್ಥ್ಯ ಹೆಚ್ಚಿಸಲು 79 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ,ಉಪಕರಣಗಳ ಖರೀದಿ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.