* ಭಾರತದ ನೌಕಾಪಡೆಯ ಬಲವನ್ನು ಹೆಚ್ಚಿಸುವ ಅತ್ಯಾಧುನಿಕ ಸಮರನೌಕೆ "ಐ ಏನ್ ಎಸ್ ಮಹೇಂದ್ರಗಿರಿ" ಸೆಪ್ಟೆಂಬರ್ 1ರಿಂದ ನೌಕಾಪಡೆಗೆ ಸೇರ್ಪಡೆಯಾಗಲಿದೆ. ಭಾರತದ ಉಪ ರಾಷ್ಟ್ರಪತಿಯಾದ ಜಗದೀಪ್ ಧನಕರ್ ದಂಪತಿಗಳು ಮಹೇಂದ್ರಗಿರಿ ನೌಕೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.* ಮುಂಬೈನ ಮಝಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ಈ "ಐ ಏನ್ ಎಸ್ ಮಹೇಂದ್ರಗಿರಿ" ನೌಕೆಯನ್ನು ನಿರ್ಮಿಸಲಾಗಿದೆ. ಪ್ರಾಜೆಕ್ಟ್ 17ಎ ಯೋಜನೆಯಡಿ ನಿರ್ಮಾಣವಾದ 7ನೇ ಯುದ್ಧ ನೌಕೆ ಇದಾಗಿದೆ.  * ಒಡಿಶಾ ಪೂರ್ವ ಘಟ್ಟ ಪ್ರದೇಶದ ಎತ್ತರದ ಪರ್ವತ ಮಹೇಂದ್ರಗಿರಿ ಯ ಹೆಸರನ್ನು ಈ ಅತ್ಯಾಧುನಿಕ ಯುದ್ಧ ನೌಕೆಗೆ ಇಡಲಾಗಿದೆ.*  ಶತ್ರು ವಿಮಾನಗಳನ್ನು, ಕ್ರೂಸ್ ಕ್ಷಿಪಣಿಗಳ ಬೆದರಿಕೆ ಎದುರಿಸಲು ಹಾಗೂ ವಾಯು ರಕ್ಷಣಾ ಸಾಮರ್ಥ್ಯವನ್ನೂ ಈ ಮಹೇಂದ್ರಗಿರಿ ನೌಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎರಡು 30 ಎಂಎಂ ಫೈರ್ ಗನ್ ಗಳನ್ನು ಅಳವಡಿಸಲಾಗಿದೆ.   * ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023 ಆಗಸ್ಟ್ 17 ರಂದು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್ ನಿರ್ಮಿಸಿದ್ದ ಪ್ರಾಜೆಕ್ಟ್ 17A ನ ಆರನೇ ಯುದ್ಧನೌಕೆ ವಿಂಧ್ಯಗಿರಿಯನ್ನು ಲೋಕಾರ್ಪಣೆಗೊಳಿಸಿದ್ದರು.