* ಪ್ರತಿ ವರ್ಷ ಅಕ್ಟೋಬರ್ 17ರಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಬಡತನ ತೊಡೆದು ಹಾಕುವುದು, ಈ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. * ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನ 2024ರ ಥೀಮ್ " ಸಾಮಾಜಿಕ ಮತ್ತು ಸಾಂಸ್ಥಿಕ ದೌರ್ಜನ್ಯವನ್ನು ಕೊನೆಗಾಣಿಸುವುದು, ನ್ಯಾಯಯುತ, ಶಾಂತಿಯುತ ಮತ್ತು ಅಂತರ್ಗತ ಸಮಾಜಗಳಿಗಾಗಿ ಒಟ್ಟಾಗಿ ಕಾರ್ಯ ನಿರ್ವಹಿಸುವುದು (Ending Social and Institutional Maltreatment Acting togeth- er for just, peaceful and inclusive societ- ies) ಎಂಬುದಾಗಿದೆ." * 1987ರ ಅಕ್ಟೋಬರ್ 17ರಂದು ಪ್ಯಾರಿಸ್ನ ಟ್ರೋಕಾಡೆರೊದಲ್ಲಿ ಸೇರಿದ ಒಂದು ಲಕ್ಷಕ್ಕೂ ಅಧಿಕ ಜನ 1948ರ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಗೆ ಸಹಿ ಹಾಕುವ ಮೂಲಕ ಬಡತನವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಘೋಷಿಸಲಾಯಿತು ಮತ್ತು ಈ ಹಕ್ಕುಗಳನ್ನು ಗೌರವಿಸಬೇಕೆಂಬ ನಿರ್ಣಯಕ್ಕೆ ಬರಲಾಯಿತು. ನಂತರ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ 1992ರ ಡಿಸೆಂಬರ್ 22ರಂದು ನಿರ್ಣಯ ಕೈಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನದ ಆಚರಣೆಗೆ ಚಾಲನೆ ನೀಡಲಾಯಿತು. 1993ರಲ್ಲಿ ಪ್ರಥಮ ಬಾರಿಗೆ ಈ ದಿನವನ್ನು ಆಚರಿಸಲಾಯಿತು.* ಪ್ರಸ್ತುತ ಭಾರತದಲ್ಲಿ ಬಡತನವು ಗಣನೀಯವಾಗಿ ಇಳಿಕೆ ಕಂಡಿದೆ. ಇತ್ತೀಚೆಗಷ್ಟೇ ಎನ್ಸಿಎಇಆರ್ ಚಿಂತನಾ ಸಂಸ್ಥೆಯ ಮುಖ್ಯಸ್ಥ ಹಣಕಾಸು ತಜ್ಞ ಸೋನಲ್ದೇ ದೇಸಾಯಿ ಅವರ ತಂಡವು ಅಧ್ಯಯನ ವರದಿಯಲ್ಲಿ ತಿಳಿಸಿದೆ. 2011 – 12 ರಲ್ಲಿ ಗ್ರಾಮೀಣ ಭಾಗದಲ್ಲಿ ಬಡತನ ಪ್ರಮಾಣ ಶೇ. 24.8ರಷ್ಟು ಇತ್ತು. ಆದರೆ ಪ್ರಸ್ತುತ ಶೇ. 8.6ಕ್ಕೆ ಕುಸಿತ ಕಂಡಿದೆ. ಅದಲ್ಲದೇ, ನಗರ ಪ್ರದೇಶದಲ್ಲಿ ಬಡತನ ಪ್ರಮಾಣ ಶೇ. 13.4 ರಷ್ಟಿತ್ತು,ಸದ್ಯಕ್ಕೆ ಶೇ. 8.4ಕ್ಕೆ ಕುಸಿತ ಕಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿರುವ ಕಾರಣವೇ ಬಡತನದ ಪ್ರಮಾಣವು ಗಣನೀಯ ಇಳಿಕೆ ಕಂಡಿದೆ.