* ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರು ಸೆಪ್ಟೆಂಬರ್. 29 ದಂದು ದೇಶದಾದ್ಯಂತ ಅಕ್ಟೋಬರ್ 1ರಂದು ನಡೆಸಲು ಉದ್ದೇಶಿಸಿ ರುವ ಸ್ವಚ್ಛತಾ ಆಂದೋಲನ ಕ್ಕಾಗಿ 6.4 ಲಕ್ಷಕ್ಕೂ ಹೆಚ್ಚು ಜಾಗಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.* ಪ್ರಧಾನಿ ನರೇಂದ್ರ ಮೋದಿ ಅವರ “ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ' ಎಂಬ ಕರೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.* 'ರೈಲು ನಿಲ್ದಾಣಗಳು ಮತ್ತು ಹಳಿಗಳು, ಜಲಕಾಯಗಳು, ಘಾಟ್‌ಗಳು, ಕೊಳೆಗೇರಿಗಳು, ಮಾರುಕಟ್ಟೆ ಪ್ರದೇಶಗಳು, ಪೂಜಾ ಸ್ಥಳಗಳು ಹಾಗೂ ಪ್ರವಾಸಿಗಳ ತಾಣಗಳಲ್ಲಿ ಈ ಆಂದೋಲನದಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.