* ವಿಶ್ವ ಆರೋಗ್ಯ ಸಂಸ್ಥೆಯು ಅಕ್ಟೋಬರ್ 7ರಿಂದ 9ರವರೆಗೆ ನವದೆಹಲಿಯಲ್ಲಿ ಆಗ್ನೇಯ ಏಷ್ಯಾದ ಪ್ರಾದೇಶಿಕ ಸಮಿತಿಯ 77ನೇ ಅಧಿವೇಶನವನ್ನು ಪ್ರಾರಂಭಿಸಿದೆ. ಭಾರತದ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು 77ನೇ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.* ಆಗ್ನೇಯ ಏಷ್ಯಾ ಪ್ರದೇಶವು ಬಾಂಗ್ಲಾದೇಶ, ಭೂತಾನ್, ಡಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ, ಭಾರತ, ಇಂಡೋನೇಷ್ಯಾ, ಮಾಲೀವ್ ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ಟಿಮೋರ್-ಲೆಸ್ತೆ ಒಟ್ಟು 11 ರಾಷ್ಟ್ರಗಳನ್ನು ಒಳಗೊಂಡಿವೆ. * ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿನ ಜನರು ಅನುಭವಿಸುತ್ತಿರುವ ಅರೋಗ್ಯ ಸವಾಲುಗಳನ್ನು ಈ ಅಧಿವೇಶನವು ಚರ್ಚಿಸುತ್ತದೆ. ಮತ್ತು ಜಾಗತೀಕ ಜನಸಂಖ್ಯೆ ಶೇ.25 ಕ್ಕಿಂತ ಹೆಚ್ಚಿನ ಮಂದಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.* ಜನರ ಆರೋಗ್ಯಕರ ಸಂಬಂದಿಸಿದ ಅಡಿಟಿತೆ ಗುರುತಿಸುವುದು, ಎಲ್ಲರಿಗೂ ಆರೋಗ್ಯ ಸೌಲಭ್ಯಗಳನ್ನು ದೊರಕುವಂತೆ ಮಾಡುವುದು ಈ ಅಧಿವೇಶನದ ಮುಖ್ಯ ಗುರಿಯಾಗಿದೆ. ಪ್ರದೇಶದ ಸುಮಾರು ಎರಡು ಶತಕೋಟಿ ಜನರಿಗೆ ಉತ್ತಮ,ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ಬದ್ಧವಾಗಿದೆ.* ಹೃದ್ರೋಗ , ಮಧುಮೇಹದಂತಹ ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳ, ಮಾನಸಿಕ ಖಿನ್ಯತೆ, ನವಜಾತ ಶಿಶುಗಳ ಮರಣ ದರದಲ್ಲಿ ಹೆಚ್ಚಳ, ಕ್ಷಯರೋಗಗಳು ಹೆಚ್ಚುತ್ತಿರುದಾಗಿ WHO ಅಧಿಕಾರಿ ರಜಿಯಾ ಪೆಂಡ್ಸೆ ಅವರು ಹೇಳಿದ್ದಾರೆ.