* ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಕನ್ಯಾಕುಮಾರಿಯಲ್ಲಿ ವಿವೇಕಾನಂದ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕ ಕಲ್ಪಿಸುವ ಗಾಜಿನ ಸೇತುವೆಯನ್ನು ಉದ್ಘಾಟಿಸಿದರು. ಭಾರತದ ಮೊದಲ ಸಮುದ್ರದ ಮೇಲಿನ ಗಾಜಿನ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.* 'ಕನ್ಯಾಕುಮಾರಿಯನ್ನು ಜಾಗತಿಕ ಪ್ರವಾಸಿ ತಾಣವಾಗಿ ಉತ್ತೇಜಿಸುವ ಉದ್ದೇಶದಿಂದ ಗಾಜಿನ ಸೇತುವೆ ನಿರ್ಮಾಣವಾಗಿರುವುದು ದೂರದೃಷ್ಟಿ ಯೋಜನೆ' ಎಂದು ಬಣ್ಣಿಸಿದರು.* ಈ ಗಾಜಿನ ಸೇತುವೆಯು 77 ಮೀಟರ್ ಉದ್ದ ಮತ್ತು 10 ಮೀಟರ್ ಅಗಲವನ್ನು ಹೊಂದಿದೆ. ಕನ್ಯಾಕುಮಾರಿ ಕಡಲತೀರದಲ್ಲಿ ನಿರ್ಮಿಸಲಾಗಿರುವ ಈ ಗಾಜಿನ ಸೇತುವೆ ದೇಶದಲ್ಲೇ ಮೊದಲ ಸೇತುವೆ ಎಂದು ಹೇಳಲಾಗುತ್ತಿದೆ. * ಕನ್ಯಾಕುಮಾರಿಯಲ್ಲಿ ನಿರ್ಮಾಣವಾಗಿರುವ ವಾಸ್ತುಶಿಲ್ಪದ ಅದ್ಭುತ ಗಾಜಿನ ಸೇತುವೆ ವಿವೇಕಾನಂದರ ಸ್ಮಾರಕ ಹಾಗೂ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುತ್ತದೆ. ಗಾಜಿನ ಸೇತುವೆಯು 252 ಅಡಿ (77 ಮೀಟರ್) ಉದ್ದ ಮತ್ತು 10 ಮೀ. ಅಗಲಕ್ಕೆ ವ್ಯಾಪಿಸಿದೆ. ಬರೋಬ್ಬರಿ 37 ಕೋಟಿ ರೂ. ವೆಚ್ಚದಲ್ಲಿ ತಮಿಳುನಾಡು ಸರ್ಕಾರ ಗಾಜಿನ ಸೇತುವೆಯನ್ನು ನಿರ್ಮಿಸಿದೆ. * 77 ಅಡಿ ಉದ್ದ ಮತ್ತು 10 ಮೀಟರ್ ಅಗಲವನ್ನು ವ್ಯಾಪಿಸಿರುವ 'ಬೌಸ್ಟ್ರಿಂಗ್-ಆರ್ಚ್' ವಿನ್ಯಾಸದ ಗಾಜಿನ ಸೇತುವೆ, ಪಾರದರ್ಶಕ ಗಾಜಿನ ಮೇಲ್ಮೈಯನ್ನು ಹೊಂದಿದೆ. ಇದರಲ್ಲಿ ಕ್ರಮಿಸುವಾಗ ಪ್ರವಾಸಿಗರಿಗೆ ಸಮುದ್ರದ ಮೇಲೆ ನಡೆಯುವ ಭಾವನೆಯನ್ನು ನೀಡುತ್ತದೆ. ಸುಧಾರಿತ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಆಕರ್ಷಕ ಸೇತುವೆಯನ್ನು ನಿರ್ಮಿಸಲಾಗಿದೆ. * ಇದು ಕನ್ಯಾಕುಮಾರಿಯ ಪ್ರವಾಸೋದ್ಯಮ ಆಕರ್ಷಣೆಗೆ ಇನ್ನಷ್ಟು ಕೊಡುಗೆ ನೀಡಲಿದೆ. ಪ್ರವಾಸಿಗರಿಗೆ ಈ ಸೇತುವ ಹೊಸ ಅನುಭವವನ್ನು ನೀಡುತ್ತದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆಯಿದೆ.