* ಕೇಂದ್ರ ಸರ್ಕಾರದ 'ಕೇರಾ' ಸುರಕ್ಷಾ ವಿಮಾ ಯೋಜನೆ ತೆಂಗಿನ ಮರಗಳನ್ನು ಏರುವ ಕೆಲಸದಲ್ಲಿ ತೊಡಗಿರುವವರಿಗೆ ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತಿದ್ದು, ಈ ವೃತ್ತಿಗೆ ಮಹತ್ವದ ಅನುಕೂಲವಾಗಿದೆ.* ತೆಂಗು ಅಭಿವೃದ್ಧಿ ಮಂಡಳಿಯು(CDB) ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ, ದಿ ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪನಿಯ ಮೂಲಕ ವಿಮಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.* ತೆಂಗಿನ ಮರವನ್ನೇರಿ ಎಳನೀರು ಮತ್ತು ಕಾಯಿ ಕೀಳುವವರಿಗೆ, ನೀರಾ ತಂತ್ರಜ್ಞರಿಗೆ, ತೆಂಗಿನ ಕಾಯಿ ಕೊಯ್ಲು ಮಾಡುವವರಿಗೆ, ಸಂಕರೀಕರಣ (ಹೈಬ್ರಿಡೈನೇಶನ್) ಕೆಲಸಗಾರರಿಗೆ, ಪ್ರಾತ್ಯಕ್ಷಿಕೆ ಹಾಗೂ ಬೀಜ ಉತ್ಪಾದನೆ(DSP), ಫಾರ್ಮ್ಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಾಗೂ ಎಫ್ಸಿಟಿ (ಫ್ರೆಂಡ್ಸ್ ಆಫ್ ಕೋಕೊನಟ್ ಟ್ರೀ) ಕೌಶಲ–ತರಬೇತಿ ಕಾರ್ಯಕ್ರಮದಲ್ಲಿ ತೊಡಗಿರುವ ಕಾರ್ಮಿಕರಿಗೆ ಸಮಗ್ರ ವಿಮಾ ರಕ್ಷಣೆ ದೊರೆಯಲಿದೆ.* ವಿಮೆಯ ವಾರ್ಷಿಕ ಕಂತು ₹956 ಆಗಿದ್ದು, ತೋಟಗಾರಿಕಾ ಇಲಾಖೆಯ ₹717 ಪಾಲನ್ನು ತೆಂಗು ಅಭಿವೃದ್ಧಿ ಮಂಡಳಿ ಭರಿಸುತ್ತದೆ. ಫಲಾನುಭವಿಗಳು ಉಳಿದ ಕೇವಲ ₹239 ಪಾವತಿಸಬೇಕು.* ಮರದಿಂದ ಕಾಯಿ ಕೀಳುವಾಗ ಬಿದ್ದು ಮೃತಪಟ್ಟರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ, ಗರಿಷ್ಠ ₹7 ಲಕ್ಷ ಪರಿಹಾರವನ್ನು ನೀಡುವ ವೈಯಕ್ತಿಕ ಅಪಘಾತ ವಿಮಾ ಯೋಜನೆ ಇದಾಗಿದೆ.* ಕಂತಿನ ಪಾವತಿ ಮೊತ್ತ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಕಟ್ಟಿದವರು ಸಮಗ್ರ ವಿಮಾ ರಕ್ಷಣೆಯ ಸೌಲಭ್ಯ ಪಡೆಯ ಬಹುದು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ‘ತಿಳಿಸಿದರು.* ತೋಟಗಾರಿಕೆ ಇಲಾಖೆಯ ಮೂಲಕ ಮಾರ್ಚ್ ಅಂತ್ಯದವರೆಗೆ ಅರ್ಜಿ ಸಲ್ಲಿಸಬಹುದು, ಮತ್ತು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಬಹುದು.* ಕೇರಾ ವಿಮೆ ಯೋಜನೆಯಡಿ ಕೇಂದ್ರ ಸರ್ಕಾರ ಬರಿಸುವ ಪರಿಹಾರದ ವೆಚ್ಚ:• ಸಾವು/ಶಾಶ್ವತ ಅಂಗವೈಕಲ್ಯ : ₹7 ಲಕ್ಷ• ಭಾಗಶಃ ಅಂಗವೈಕಲ್ಯ : ₹3.50 ಲಕ್ಷ• ಆಸ್ಪತ್ರೆಯಿಂದ ಬಿಡುಗಡೆ ಆದ ನಂತರ 2 ತಿಂಗಳುಗಳವರೆಗೆ ಔಷಧ ಸೇರಿದಂತೆ ವೆಚ್ಚದ ಮರುಪಾವತಿ : ₹2 ಲಕ್ಷ• ಅಪಘಾತ ಅಥವಾ ಸಾವು ವೇಳೆ ಆಂಬುಲೆನ್ಸ್ ಶುಲ್ಕ : ₹3,500• ತಾತ್ಕಾಲಿಕ ಅಂಗವೈಕಲ್ಯ ಸಮಯದಲ್ಲಿ 6 ವಾರಗಳವರೆಗೆ ಪರಿಹಾರ : ₹21,000• ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದವರಿಗೆ ನೈಜ ಬಿಲ್ ಆಧಾರದಲ್ಲಿ ವೆಚ್ಚ: ₹3,000• ಅಂತ್ಯಕ್ರಿಯೆಗೆ ನೀಡುವ ವೆಚ್ಚ: ₹5,500